ADVERTISEMENT

ಬಿಜೆಪಿಯವರು ಭಿಕ್ಷೆ ಬೇಡಿದ್ದರೆ ಸಿ.ಎಂ ಸ್ಥಾನ ತ್ಯಾಗ: ಸಾ.ರಾ.ಮಹೇಶ್‌

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 18:55 IST
Last Updated 7 ಫೆಬ್ರುವರಿ 2019, 18:55 IST

ಸಾಲಿಗ್ರಾಮ (ಮೈಸೂರು): ಬಿಜೆಪಿ ನಾಯಕರು ಮುಖ್ಯಮಂತ್ರಿ ಬಳಿ ಬಂದು, ಅಧಿಕಾರ ಮತ್ತು ಕುರ್ಚಿ ಬಿಟ್ಟುಕೊಡುವಂತೆ ಭಿಕ್ಷೆ ಬೇಡಿದ್ದರೆ ಎಚ್.ಡಿ.ಕುಮಾರ ಸ್ವಾಮಿ ಅಧಿಕಾರ ತ್ಯಾಗ ಮಾಡುತ್ತಿದ್ದರು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹೇಳಿದರು.

ಕೆ.ಆರ್.ನಗರದ ಬಂಡಳ್ಳಿಯಲ್ಲಿ ಲಕ್ಷ್ಮಿದೇವಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅನಿತಮ್ಮ ಎರಡನೇ ತಾಯಿ: ‘ನನಗೆ ಜನ್ಮ ನೀಡಿದ ಕಾಂತಮ್ಮ ಮೊದಲ ತಾಯಿಯಾದರೆ, ರಾಜಕೀಯವಾಗಿ ಬೆಳೆಯಲು ಸಹಕರಿಸಿದ ಹಾಗೂ ಸಚಿವ ಸ್ಥಾನ ಸಿಗುವಂತೆ ಮಾಡಿದ ಅನಿತಮ್ಮ ಎರಡನೇ ತಾಯಿ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.