ಮಂಡ್ಯ: ‘ಬೇರೆಯವರಿಗಿಂತ,ರಾಜಕಾರಣಿಗಳ ಮಕ್ಕಳು ಬೇಗ ಮಾದಕ ವಸ್ತುಗಳ ವ್ಯಸನಿಗಳಾಗುವ ಅಪಾಯವಿದ್ದು, ಸರ್ಕಾರ ಶೀಘ್ರವೇ ಡ್ರಗ್ ಜಾಲವನ್ನು ಭೇದಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಸೋಮವಾರ ಇಲ್ಲಿ ಆಗ್ರಹಿಸಿದರು.
‘ರಾಜಕಾರಣಿಗಳ ಮಕ್ಕಳು ಆರ್ಥಿಕವಾಗಿ ಹೆಚ್ಚು ಸಬಲರಾಗಿರುತ್ತಾರೆ. ಬಹುಬೇಗ ಇಂಥ ಜಾಲದೊಳಗೆ ಸಿಲುಕಿಕೊಳ್ಳುವ ಅಪಾಯವಿರುತ್ತದೆ. ಈ ಜಾಲವನ್ನು ಭೇದಿಸದಿದ್ದರೆ ನಮ್ಮ ಮಕ್ಕಳೇ ಹಾಳಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಡ್ರಗ್ ಮಾಫಿಯಾ ತಡೆಗೆ ಸಂಘ ಸಂಸ್ಥೆಗಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.