ADVERTISEMENT

ಶೀಘ್ರ ಡ್ರಗ್‌‌ ಜಾಲ ಶೀಘ್ರ ಭೇದಿಸಲಿ: ಎಚ್‌.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 18:31 IST
Last Updated 31 ಆಗಸ್ಟ್ 2020, 18:31 IST
ಎಚ್‌.ವಿಶ್ವನಾಥ್
ಎಚ್‌.ವಿಶ್ವನಾಥ್   

ಮಂಡ್ಯ: ‘ಬೇರೆಯವರಿಗಿಂತ,ರಾಜಕಾರಣಿಗಳ ಮಕ್ಕಳು ಬೇಗ ಮಾದಕ ವಸ್ತುಗಳ ವ್ಯಸನಿಗಳಾಗುವ ಅಪಾಯವಿದ್ದು, ಸರ್ಕಾರ ಶೀಘ್ರವೇ ಡ್ರಗ್‌‌ ಜಾಲವನ್ನು ಭೇದಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌. ವಿಶ್ವನಾಥ್‌ ಸೋಮವಾರ ಇಲ್ಲಿ ಆಗ್ರಹಿಸಿದರು.

‘ರಾಜಕಾರಣಿಗಳ ಮಕ್ಕಳು ಆರ್ಥಿಕವಾಗಿ ಹೆಚ್ಚು ಸಬಲರಾಗಿರುತ್ತಾರೆ. ಬಹುಬೇಗ ಇಂಥ ಜಾಲದೊಳಗೆ ಸಿಲುಕಿಕೊಳ್ಳುವ ಅಪಾಯವಿರುತ್ತದೆ. ಈ ಜಾಲವನ್ನು ಭೇದಿಸದಿದ್ದರೆ ನಮ್ಮ ಮಕ್ಕಳೇ ಹಾಳಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಡ್ರಗ್‌‌ ಮಾಫಿಯಾ ತಡೆಗೆ ಸಂಘ ಸಂಸ್ಥೆಗಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.