ADVERTISEMENT

ಅಜ್ಜನ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಮೊಮ್ಮಗ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 16:24 IST
Last Updated 26 ಅಕ್ಟೋಬರ್ 2023, 16:24 IST
ಭುವನ ಪ್ರಭಾಕರ
ಭುವನ ಪ್ರಭಾಕರ   

ತೇರದಾಳ (ಬಾಗಲಕೋಟೆ ಜಿಲ್ಲೆ): ದಸರಾ ಆಯುಧ ಪೂಜೆಗೆ ಅಜ್ಜನ ಪರವಾನಗಿ ಹೊಂದಿದ ಪಿಸ್ತೂನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಭುವನ ಪ್ರಭಾಕರ (20) ಎಂಬವರ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಇಲ್ಲಿನ ಗೋಲಭಾವಿ ರಸ್ತೆಯಲ್ಲಿರುವ ಷಣ್ಮುಖ ಗಾಡದಿ ಎಂಬವರು ಆಯುಧ ಪೂಜೆಯಂದು ಪರವಾನಗಿ ಹೊಂದಿದ್ದ ತಮ್ಮ ಪಿಸ್ತೂಲ್‌ ಅನ್ನು ಪೂಜೆ ಮಾಡಿದ್ದರು. ಬಳಿಕ ಅದೇ ಪಿಸ್ತೂಲಿನಿಂದ ಮೊಮ್ಮಗ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿತ್ತು. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT