ADVERTISEMENT

ತಾಕತ್ತು ತೋರಿಸಲು ಇದು ಕುಸ್ತಿ ಮೈದಾನ ಅಲ್ಲ: ಸಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 18:13 IST
Last Updated 3 ಅಕ್ಟೋಬರ್ 2019, 18:13 IST

ದಾವಣಗೆರೆ: ‘ಕೇಂದ್ರದಿಂದ ಬರ ಪರಿಹಾರ ಬಂದಾಗ ಯಾರ ತಾಕತ್ತು ಏನೆಂಬುದು ವಿರೋಧ ಪಕ್ಷಗಳಿಗೆ ಅರಿವಾಗಲಿದೆ. ತಾಕತ್ತು ತೋರಿಸಲು ಇದೇನು ಕುಸ್ತಿ ಮೈದಾನ ಅಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ವಿರೋಧ‍ ಪ‍ಕ್ಷಗಳಿಗೆ ತಿರುಗೇಟು ನೀಡಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿ ನಾವಿದ್ದೇವೆ. ರಾಜ್ಯ ಸರ್ಕಾರ ಕೈ ಕಟ್ಟಿ ಕೂತಿಲ್ಲ. ಈಗಾಗಲೇ ಪ್ರವಾಹ ಸಂತ್ರಸ್ತರಿಗೆ ₹ 1,500 ಕೋಟಿ ಪರಿಹಾರ ನೀಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT