ADVERTISEMENT

ಸಿಎಂ ಭೇಟಿಗೆ ಶಾಸಕರು, ಸಂಸದರಿಗೆ ಪ್ರತ್ಯೇಕ ಸಮಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2018, 19:04 IST
Last Updated 7 ಆಗಸ್ಟ್ 2018, 19:04 IST

ಬೆಂಗಳೂರು: ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅರ್ಜಿ ಮತ್ತು ಅಹವಾಲುಗಳನ್ನು ಸಲ್ಲಿಸಲು ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ.

ವಾರದಲ್ಲಿ ಎರಡು– ಮೂರು ದಿನ ಶಾಸಕರು ನಿಗದಿ ಮಾಡಿದ ಸಮಯದಲ್ಲಿ ಬಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಬಹುದು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಈ ಹಿಂದೆ ಅದಕ್ಕಾಗಿ ಬೇರೆ ಸಮಯವನ್ನು ಗೊತ್ತು ಮಾಡಿರಲಿಲ್ಲ. ಶಾಸಕರು ಮತ್ತು ಸಂಸದರು ಯಾವ್ಯಾವುದೋ ಸಮಯದಲ್ಲಿ ಬಂದು ಅರ್ಜಿ ಕೊಡಲು ಬರುತ್ತಿದ್ದರು. ಇದನ್ನು ವ್ಯವಸ್ಥಿತವಾಗಿಸಲು ಹೊಸ ವ್ಯವಸ್ಥೆ ಇಂದಿನಿಂದ (ಮಂಗಳವಾರ)ಆರಂಭಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.