ADVERTISEMENT

ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 5:15 IST
Last Updated 9 ಜುಲೈ 2019, 5:15 IST
   

ಬೆಂಗಳೂರು: ವಿಧಾನಸೌಧದಲ್ಲಿ ಬಹುನಿರೀಕ್ಷಿತ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಸಭೆಗೆ ಗೈರು ಹಾಜರಾಗಿರುವ ಒಂಬತ್ತ ಶಾಸಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಶಾಸಕರಾದಎಂಟಿಬಿ ನಾಗರಾಜ್, ಅಂಜಲಿ ನಿಂಬಾಳ್ಕರ್,ಸುಧಾಕರ್, ರಾಜೇಗೌಡ, ಸಂಗಮೇಶ್ ಭದ್ರಾವತಿ, ಶ್ರೀಮಂತ ಪಾಟೀಲ ರೋಷನ್‌ ಬೇಗ್, ರಾಮಲಿಂಗಾರೆಡ್ಡಿ, ತುಕಾರಾಂ ಸಭೆಯಲ್ಲಿ ಪಾಲ್ಗೊಂಡಿಲ್ಲ.

ಸಭೆಯಲ್ಲಿ ಪಾಲ್ಗೊಂಡಿರುವ ಸೌಮ್ಯಾರೆಡ್ಡಿ ತಮ್ಮ ನಿರ್ಧಾರವನ್ನು ನಂತರ ತಿಳಿಸುವುದಾಗಿ ಈ ಮೊದಲು ಹೇಳಿದ್ದರು. ಸಭೆಯಲ್ಲಿ ಪಾಲ್ಗೊಂಡಿರುವ ಶಾಸಕರು ‘ಮೈತ್ರಿ ಸಾಕು’ ಎನ್ನುತ್ತಿದ್ದಾರೆ ಎಂದು ಸುದ್ದಿ ಚಾನೆಲ್‌ಗಳು ವರದಿ ಮಾಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.