ADVERTISEMENT

ಮೋದಿ ಅಂದ್ರೆ ಸಮಸ್ಯೆ ಬಗೆಹರಿಯದು: ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 20:00 IST
Last Updated 12 ಜನವರಿ 2020, 20:00 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋ ತ್ಸವದಲ್ಲಿ ಮೋದಿ ಮೋದಿ ಎಂದು ಜನರು ಕೂಗಿದ್ದಕ್ಕೆ ಸಿದ್ದರಾಮಯ್ಯ ಗರಂ ಆದ ಪ್ರಸಂಗ ಭಾನುವಾರ ನಡೆಯಿತು.

ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು, ‘ಹೀಗೆ ಕೂಗಿದರೆ ನೆರೆ ಸಂತ್ರಸ್ತರ ಸಮಸ್ಯೆ ಹಾಗೂ ದೇಶದ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದರು.

‘ದೇಶದಲ್ಲಿ ಈಚೆಗೆ ಮೋದಿ ಎಂದು ಕೂಗುವುದು ಫ್ಯಾಷನ್ ಆಗಿದೆ. ಈ ಯುವಕರಿಗೆ ಯಾವುದೇ ಜವಾಬ್ದಾರಿ ಇಲ್ಲ. ಹೀಗೆ ಕೂಗುವುದರಿಂದ ಪ್ರವಾಹ, ದೇಶದ ಸಮಸ್ಯೆಗಳು ಬಗೆಹರಿಯುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಮಂಗಳೂರು ಪೊಲೀಸರ ತಪ್ಪಿನಿಂದ ಗಲಾಟೆ ಆಗಿದೆ. ಪೊಲೀ ಸರಿಗೆಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ಸಿ.ಡಿ ಇದ್ದರೆ ಸವದಿ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಭಟ್ಟಂಗಿತನ ತೋರುವುದಲ್ಲ. ಬ್ಲೂ ಫೀಲಂ ನೋಡಿ ದವರಿಂದ ನಾನು ಪಾಠ ಕಲಿಯಬೇಕಿಲ್ಲ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.