ADVERTISEMENT

ಪ್ರವಾಸಕ್ಕೆ ಬಂದಿದ್ದ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 15:35 IST
Last Updated 21 ಅಕ್ಟೋಬರ್ 2018, 15:35 IST

ಉಡುಪಿ: ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆ ಬಂದಿದ್ದ ಯುವಕ ಮೂಡನಿಡಂಬೂರು ಬಳಿಯ ಸುಖಾನಂದ ಹೋಟೆಲ್‌ ಬಳಿ ಭಾನುವಾರ ಮೃತಪಟ್ಟಿದ್ದಾನೆ.‌

ಬೆಂಗಳೂರಿನ ಕೆ.ಜಿನಗರ ನಿವಾಸಿ ವಿನಯ್‌ಗೌಡ (16) ಮೃತ ಯುವಕ. ಬೆಳಿಗ್ಗೆ 8ರ ಸುಮಾರಿಗೆ ಪ್ರವಾಸಕ್ಕೆ ತಂದಿದ್ದ ಮಿನಿಬಸ್‌ನಲ್ಲಿ ವಿನಯ್‌ಗೌಡ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದಾರೆ.

ಈ ಸಂಬಂಧ ನಗರ ಠಾಣೆಯಲ್ಲಿ ಅಸ್ವಾಭವಿಕ ಸಾವು ಪ್ರಕರಣ ದಾಕಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.