ADVERTISEMENT

ಈಸೂರು ಲೋಕೇಶ್ ನಿಧನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:02 IST
Last Updated 1 ಆಗಸ್ಟ್ 2019, 19:02 IST
ಈಸೂರು ಲೋಕೇಶ್
ಈಸೂರು ಲೋಕೇಶ್   

ಶಿವಮೊಗ್ಗ: ಸಾಮಾಜಿಕ ಹೋರಾಟಗಾರ, ವಕೀಲ ಈಸೂರು ಲೋಕೇಶ್ (59) ಅನಾರೋಗ್ಯದ ಕಾರಣ ಗುರುವಾರ ನಿಧನರಾದರು.

ಎಡಪಂಥೀಯ ಚಿಂತಕರಾಗಿದ್ದಇವರು ನಕ್ಸಲ್‌ ಚಳವಳಿ ಜತೆಗೂ ಗುರುತಿಸಿಕೊಂಡಿದ್ದರು.

ತುಂಗ–ಭದ್ರಾ ಉಳಿಸಿ ನದಿ ಆಂದೋಲನ, ಭೂಮಿ ಹೋರಾಟ ಸೇರಿದಂತೆ ಹಲವು ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ADVERTISEMENT

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.ಅಂತ್ಯಕ್ರಿಯೆ ಸವಳಂಗ ಸಮೀಪದ ಅವರ ಜಮೀನಿನಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂಪರ್ಕಕ್ಕೆ: 9113205893.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.