ADVERTISEMENT

ಮರಣದಂಡನೆ ಅರ್ಜಿ|2 ವಾರದಲ್ಲಿ ವಿವರ ಒದಗಿಸಿ: ಕರ್ನಾಟಕ ಹೈಕೋರ್ಟ್‌ಗೆ SC ನಿರ್ದೇಶನ

ಪಿಟಿಐ
Published 20 ಅಕ್ಟೋಬರ್ 2025, 20:32 IST
Last Updated 20 ಅಕ್ಟೋಬರ್ 2025, 20:32 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಮರಣದಂಡನೆ ಅರ್ಜಿಗಳು ಬಾಕಿ ಇರುವ ಬಗ್ಗೆ ವಿವರಗಳನ್ನು ನೀಡಲು ವಿಫಲವಾಗಿದ್ದಕ್ಕೆ ಹೈಕೋರ್ಟ್‌ ಅನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು ಹಾಗೂ ಈ ಸಂಬಂಧ ಎರಡು ವಾರಗಳಲ್ಲಿ ರಿಜಿಸ್ಟ್ರಾರ್ ಜನರಲ್‌ ವಿವರ ನೀಡಬೇಕು ಎಂದು ನಿರ್ದೇಶನ ನೀಡಿತು. 

ಪ್ರಕರಣವೊಂದರ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಹಾಗೂ ಪಂಕಜ್‌ ಮಿತ್ತಲ್‌ ಅವರ ‍ಪೀಠವು ದೇಶದಾದ್ಯಂತ ಬಾಕಿ ಇರುವ ಮರಣದಂಡನೆ ಅರ್ಜಿಗಳ ಕುರಿತು ವಿವರಗಳನ್ನು ಕೋರಿತು.

ಎಲ್ಲ ಹೈಕೋರ್ಟ್‌ಗಳು, ದುರದೃಷ್ಟವಶಾತ್ ಕರ್ನಾಟಕದ ಹೈಕೋರ್ಟ್ ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಅಗತ್ಯವಾದ ದತ್ತಾಂಶ ಒದಗಿಸಲು ವಿಫಲವಾಗಿದೆ ಎಂದು ನ್ಯಾಯಪೀಠ ಗಮನಿಸಿತು.

ADVERTISEMENT

‘ಅಗತ್ಯ ಮಾಹಿತಿ ಒದಗಿಸಲು ಏಕೆ ವಿಫಲರಾಗಿದ್ದಾರೆ ಎಂಬುದನ್ನು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ವಿವರಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿವರಣೆ ನೀಡಲು  ರಿಜಿಸ್ಟ್ರಾರ್ ಜನರಲ್‌ಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ‘ ಎಂದು ಪೀಠ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.