ADVERTISEMENT

ದೆಹಲಿ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಸಿ.ಎಂ.ನಾಗರಾಜ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 15:12 IST
Last Updated 4 ಅಕ್ಟೋಬರ್ 2021, 15:12 IST
ಆರ್.ರೇಣುಕುಮಾರ್ ಹಾಗೂ ಸಿ.ಎಂ. ನಾಗರಾಜ
ಆರ್.ರೇಣುಕುಮಾರ್ ಹಾಗೂ ಸಿ.ಎಂ. ನಾಗರಾಜ   

ನವದೆಹಲಿ: ದೆಹಲಿ ಕರ್ನಾಟಕ ಸಂಘದ 2021–22ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ಚುನಾವಣೆ ನಡೆಯಿತು.

ಅಧ್ಯಕ್ಷರಾಗಿ ಸಿ.ಎಂ. ನಾಗರಾಜ, ಉಪಾಧ್ಯಕ್ಷರಾಗಿ ಡಾ.ಎಂ.ಎಸ್. ಶಶಿಕುಮಾರ್, ಪೂಜಾ ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ರೇಣುಕುಮಾರ್, ಜಂಟಿ ಕಾರ್ಯದರ್ಶಿಗಳಾಗಿ ಬಿ.ನಾರಾಯಣ, ಸುಮಿತಾ ಮುರಗೋಡ, ಖಜಾಂಚಿಯಾಗಿ ರಾಧಾಕೃಷ್ಣ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಭಾಕರ ಮಡ್ಡಿತೊಟ, ಎಂ.ಶಿವಪ್ಪ, ಎ.ಟಿ. ಶ್ರೀನಿವಾಸ, ಕೆ.ಎಸ್. ಮೂರ್ತಿ, ಮಾಲಿನಿ ಪ್ರಹ್ಲಾದ್, ವಿ.ನವೀನ ಕುಮಾರ್, ಸವಿತಾ ನೆಲ್ಲಿ, ಬಿ.ಎಸ್. ಅಶ್ವಿನಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.