ADVERTISEMENT

ರಾಘವೇಂದ್ರ ಔರಾದ್ಕರ್‌ ವರದಿ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 20:15 IST
Last Updated 6 ಜುಲೈ 2019, 20:15 IST

ಬೆಂಗಳೂರು:‘ಪೊಲೀಸ್‌ ಇಲಾಖೆಯಲ್ಲಿ ಜೀತ ಪದ್ಧತಿ ಹೋಗಲಾಡಿಸುವ ಸಲುವಾಗಿ ರಾಘವೇಂದ್ರ ಔರಾದ್ಕರ್ ಸಮಿತಿಯ ವರದಿ ಜಾರಿಗೊಳಿಸಬೇಕು’ ಎಂದು ಕರ್ನಾಟಕ ರಕ್ಷಣಾ ಸೇನೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ಅಧ್ಯಕ್ಷ ಟಿ.ರಮೇಶ್‌ ಗೌಡ, ‘ಔರಾದ್ಕರ್‌ ವರದಿಯ ಪ್ರಕಾರ ಪೊಲೀಸ್‌ ಸಿಬ್ಬಂದಿಯ ವೇತನವನ್ನು ಶೇ 30ರಿಂದ ಶೇ 35 ರಷ್ಟು ಹೆಚ್ಚಿಸಬೇಕು. ಕಡಿತಗೊಳಿಸಿರುವ ರಜೆಯ ಪ್ರಮಾಣವನ್ನು ಮತ್ತೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ಔರಾದ್ಕರ್‌ ವರದಿ ಜಾರಿಗೆ ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ, ಇದೇ 9 ರಂದು ಟೌನ್‌ಹಾಲ್‌ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ. ಅದೇ ರೀತಿ ವಿವಿಧ ಜಿಲ್ಲೆಗಳಲ್ಲಿಯೂ ಪ್ರತಿಭಟನೆ ನಡೆಸಿ ವರದಿ ಅನುಷ್ಠಾನಕ್ಕೆ ಆಗ್ರಹಿಸಲಿದ್ದೇವೆ’ ಎಂದು ಅವರು
ಎಚ್ಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.