ADVERTISEMENT

‘ಮಾನನಷ್ಟ ಮೊಕದ್ದಮೆಯಿಂದ ಸತ್ಯ ಬಯಲಿಗೆ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 13:11 IST
Last Updated 28 ನವೆಂಬರ್ 2019, 13:11 IST

ಶಿರಸಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದರೆ, ಆಪರೇಷನ್ ಕಮಲದ ಎಲ್ಲ ಮಗ್ಗಲುಗಳ ಸತ್ಯ ತನಿಖೆಯಿಂದ ಬಯಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪರೇಷನ್ ಕಮಲದ ಧ್ವನಿ ಮುದ್ರಿಕೆಯಿದೆ. ಶಾಸಕ ಶ್ರೀನಿವಾಸ ಗೌಡರು ಬಿಜೆಪಿ ನೀಡಿದ್ದ ಆಮಿಷದ ಬಗ್ಗೆ ಸದನದಲ್ಲಿ ಹೇಳಿದ್ದಾರೆ. 17 ಶಾಸಕರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಅಮಿತ್ ಶಾ ಸಹಕಾರ ನೀಡಿದ್ದನ್ನು ರಮೇಶ ಜಾರಕಿಹೊಳಿ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ ಇನ್ನೇನು ದಾಖಲೆ ಬೇಕು ‘ ಯಡಿಯೂರಪ್ಪ ಮಾನನಷ್ಟ ಮೊಕದ್ದಮೆ ಹೂಡಿದರೆ ನಮಗೇ ಅನುಕೂಲ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT