ADVERTISEMENT

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 22:40 IST
Last Updated 7 ಆಗಸ್ಟ್ 2021, 22:40 IST

ಬೆಂಗಳೂರು: ರಾಜ್ಯದ 30 ಜಿಲ್ಲೆಗಳಿಗೆ ವಿವಿಧ ಇಲಾಖೆಗಳ ಹಿರಿಯ ಐಎಎಸ್‌ ಅಧಿಕಾರಿಗಳನ್ನು ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ.

ಹೊಸದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಗೆ ಉಸ್ತುವಾರಿ ಕಾರ್ಯದರ್ಶಿಯನ್ನು ನೇಮಿಸಿಲ್ಲ. ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಶೀಲನೆ, ಅಹವಾಲು ವಿಚಾರಣೆ, ದಿಢೀರ್‌ ಪರಿಶೀಲನೆ ಮತ್ತು ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸುವ ಅಧಿಕಾರವನ್ನು ಉಸ್ತುವಾರಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ.

ವಿವರ: ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ (ಮಂಡ್ಯ), ಬಿ.ಬಿ. ಕಾವೇರಿ (ಚಾಮರಾಜನಗರ), ನವೀನ್‌ ರಾಜ್‌ ಸಿಂಗ್‌ (ಹಾಸನ), ವಿ. ಅನ್ಬುಕುಮಾರ್‌ (ಕೊಡಗು), ಸಿ. ಶಿಖಾ (ಚಿಕ್ಕಮಗಳೂರು), ಕ್ಯಾಪ್ಟನ್‌ ಮಣಿವಣ್ಣನ್‌ ಪಿ. (ಉಡುಪಿ), ವಿ. ಪೊನ್ನುರಾಜ್‌ (ದಕ್ಷಿಣ ಕನ್ನಡ), ರಾಕೇಶ್ ಸಿಂಗ್‌ (ತುಮಕೂರು), ಡಾ.ರವಿಕುಮಾರ್‌ ಸುರ್‌ಪುರ್‌ (ಧಾರವಾಡ). ಮೊಹಮ್ಮದ್ ಮೊಹಿಸಿನ್‌ (ಗದಗ), ಡಿ. ರಂದೀಪ್‌ (ವಿಜಯಪುರ), ಕೆ.ಪಿ. ಮೋಹನ್‌ ರಾಜ್‌ (ಉತ್ತರ ಕನ್ನಡ), ಶಿವಯೋಗಿ ಸಿ. ಕಳಸದ (ಬಾಗಲಕೋಟೆ), ಗುಂಜನ್‌ ಕೃಷ್ಣ (ಕಲಬುರ್ಗಿ), ಮುನೀಶ್ ಮೌದ್ಗಿಲ್‌ (ಯಾದಗಿರಿ), ಡಾ. ವಿಶಾಲ್‌ ಆರ್‌. (ರಾಯಚೂರು), ಡಾ. ರಶ್ಮಿ ವಿ. ಮಹೇಶ್ (ಕೊಪ್ಪಳ), ಡಾ.ಎಂ.ಎನ್‌. ಅಜಯ್‌ ನಾಗಭೂಷಣ್‌ (ಬಳ್ಳಾರಿ), ರಿಚರ್ಡ್‌ ವಿನ್ಸೆಂಟ್‌ ಡಿಸೋಜ (ಬೀದರ್‌), ಮನೋಜ್‌ ಜೈನ್‌ (ಹಾವೇರಿ).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.