ಹೊಸನಗರ: ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ವಾರಾಹಿ ಜಲಾನಯನ ಪ್ರದೇಶದಲ್ಲಿ ಗುರುವಾರ ಸಂಜೆ 5.55ಕ್ಕೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಜಲಾನಯನ ಪ್ರದೇಶದ ಯಡೂರು, ಸುಳಗೋಡು, ಖೈರುಗುಂದಾ ಹಾಗೂ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಶಬ್ದದೊಂದಿಗೆ ಸುಮಾರು 2 ಸೆಕೆಂಡ್ಗಳ ಕಾಲ ಲಘು ಭೂಕಂಪನ ಆಗಿದೆ.
ಈ ವಾರದಲ್ಲಿ ಮೊದಲ ಬಾರಿಗೆ ಹಗಲು ಭೂಕಂಪನ ಆಗಿದ್ದು, ಮಹಿಳೆಯರು, ಮಕ್ಕಳು ಹೆದರಿ ಮನೆಯಿಂದ ಹೊರಗೆ ಓಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.