ADVERTISEMENT

ನಮ್ಮ ಸರ್ಕಾರದಲ್ಲಿ ಚೆಕ್ ಬೌನ್ಸ್ ಆಗಿರಲಿಲ್ಲ, ಇದು ದರಿದ್ರ ಸರ್ಕಾರ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 9:46 IST
Last Updated 9 ಫೆಬ್ರುವರಿ 2020, 9:46 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ   

ದಾವಣಗೆರೆ:ನಮ್ಮ ಸರ್ಕಾರದಲ್ಲಿ ಒಂದೂ ಚೆಕ್ ಬೌನ್ಸ್ ಆಗಿರಲಿಲ್ಲ, ಇದು ಅತ್ಯಂತ ದರಿದ್ರ ಸರ್ಕಾರ ಎಂದು ಸರ್ಕಾರದ ವಿರುದ್ಧಮಾಜಿ ಸಿಎಂ ಸಿದ್ದರಾಮಯ್ಯವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ದಾವಣೆಗೆರೆಯಲ್ಲಿ ಮಾತನಾಡಿದ ಅವರು,ನಮ್ಮ ಸರ್ಕಾರ ಇದ್ದಾಗ ಹಣ ಇತ್ತು, ಈಗ ಇಲ್ಲ ಅಂದ್ರೆ ಏನರ್ಥ?,ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಕೊಡುವ ಲ್ಯಾಪ್‌ಟಾಪ್ ನಿಲ್ಲಿಸಬಾರದು,ಸರ್ಕಾರಕ್ಕೆ ಬಡಮಕ್ಕಳ ಮೇಲೆ ಕಾಳಜಿ ಇದ್ರೆ ಲ್ಯಾಪ್‌ಟಾಪ್ ಕೊಡಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಹೈಕಮಾಂಡ್ ನಿರ್ಧರಿಸಲಿದೆ

ADVERTISEMENT

ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಶೀಘ್ರವೇ ಹೈಕಮಾಂಡ್ ನಿರ್ಧರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಸಿ ಪಾಟೀಲ್ ಏನ್ ಓದಿದಾನೆ ಯಾರಿಗ್ ಗೊತ್ತಿದೆ?
ಅವರಿಗೆ ಕಾನೂನು ಗೊತ್ತೇ ಇಲ್ಲ ಎಂದರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.