ADVERTISEMENT

ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಯುವಕರಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 14:41 IST
Last Updated 5 ನವೆಂಬರ್ 2019, 14:41 IST
ಕುಶಾಲನಗರ ಬೈಚನಹಳ್ಳಿ ಬ್ಲೂಮೂನ್ ಪೆಟ್ರೋಲ್ ಬಂಕ್ ನಲ್ಲಿ ಸೋಮವಾರ ರಾತ್ರಿ ಯುವಕರ ಗುಂಪೊಂದು ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುಸಿದ ದೃಶ್ಯ
ಕುಶಾಲನಗರ ಬೈಚನಹಳ್ಳಿ ಬ್ಲೂಮೂನ್ ಪೆಟ್ರೋಲ್ ಬಂಕ್ ನಲ್ಲಿ ಸೋಮವಾರ ರಾತ್ರಿ ಯುವಕರ ಗುಂಪೊಂದು ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುಸಿದ ದೃಶ್ಯ   

ಕುಶಾಲನಗರ: ಇಲ್ಲಿನ ಬೈಚನಹಳ್ಳಿ ಬ್ಲೂಮೂನ್ ಪೆಟ್ರೋಲ್ ಬಂಕ್‌ನಲ್ಲಿ ಸೋಮವಾರ ರಾತ್ರಿ ಐವತ್ತು ರೂಪಾಯಿಗೆ ಸ್ವೈಪಿಂಗ್ ನಿರಾಕರಿಸಿದ ಸಿಬ್ಬಂದಿ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ.

ಸೂರ್ಯ ಹಲ್ಲೆಗೆ ಒಳಗಾದ ವ್ಯಕ್ತಿ. ಸೋಮವಾರ ರಾತ್ರಿ ಪೆಟ್ರೋಲ್ ಬಂಕ್ ಗೆ ಬೈಕ್‌ನಲ್ಲಿ ಬಂದು ಬಂದ ಯುವಕರ ತಂಡ ₹50 ಗೆ ಪೆಟ್ರೋಲ್ ಹಾಕಿಸಿಕೊಂಡು ಎಟಿಎಂ ಕಾರ್ಡ್ ನೀಡಿದ್ದಾರೆ. ಆದರೆ ಬಂಕ್ ಸಿಬ್ಬಂದಿ ಸೂರ್ಯ ₹50 ರೂಪಾಯಿ ಸ್ವೈಪಿಂಗ್ ಮಾಡೋಕೆ ಆಗಲ್ಲ ಎಂದು ನಿರಾಕರಿಸಿ ಹಣ ನೀಡುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ಹಾಗೂ ಆತನ ಸ್ನೇಹಿತರು ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಪಟ್ಟಣದ ತಾವರೆಕೆರೆ ಬಳಿಯ ವರ್ಕ್ಸ್ ಶಾಪ್ ಸಿಬ್ಬಂದಿ ಜೈಹೀರ್ ಹಾಗೂ ಆತನ ಸ್ನೇಹಿತರೇ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೆ ಒಳಗಾದ ಸೂರ್ಯ ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ADVERTISEMENT

ಯುವಕರ ಪುಂಡಾಟ, ಹಲ್ಲೆಯ ವಿಡಿಯೊ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.