ADVERTISEMENT

ಪ್ರಸನ್ನ, ಹನೀಫ್‌ ಸಹಿತ 5 ಮಂದಿಗೆ ಸಂದೇಶ ಪ್ರಶಸ್ತಿ

ಮಂಗಳೂರು: ಜ. 22ರಂದು ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 17:53 IST
Last Updated 4 ಡಿಸೆಂಬರ್ 2018, 17:53 IST
ಬಿ.ಎಂ.ಹನೀಫ್, ಸಾಹಿತಿ ಪ್ರಸನ್ನ ಹೆಗ್ಗೋಡು, ಬಿ.ಎಂ ರೋಹಿಣಿ, ಫಾ.ಬೆನ್‌ ಬ್ರಿಟ್ಟೊ ಪ್ರಭು, ಮಂಜಮ್ಮ ಜೋಗತಿ ಪ್ರಶಸ್ತಿ ಪುರಸ್ಕೃತರು
ಬಿ.ಎಂ.ಹನೀಫ್, ಸಾಹಿತಿ ಪ್ರಸನ್ನ ಹೆಗ್ಗೋಡು, ಬಿ.ಎಂ ರೋಹಿಣಿ, ಫಾ.ಬೆನ್‌ ಬ್ರಿಟ್ಟೊ ಪ್ರಭು, ಮಂಜಮ್ಮ ಜೋಗತಿ ಪ್ರಶಸ್ತಿ ಪುರಸ್ಕೃತರು   

ಮಂಗಳೂರು: ನಗರದ ಸಂದೇಶ ಪ್ರತಿಷ್ಠಾನದ 2019ನೇ ಸಾಲಿನ ಸಂದೇಶ ಪ್ರಶಸ್ತಿಗೆ ಸಾಹಿತಿ ಪ್ರಸನ್ನ ಹೆಗ್ಗೋಡು, ‘ಪ್ರಜಾವಾಣಿ’ಯ ಸಹ ಸಂಪಾದಕ ಬಿ.ಎಂ.ಹನೀಫ್ ಸಹಿತ ಐದು ಮಂದಿ ಆಯ್ಕೆಯಾಗಿದ್ದಾರೆ.

ಬಿ.ಎಂ. ರೋಹಿಣಿ (ಶಿಕ್ಷಣ), ಫಾ.ಬೆನ್‌ ಬ್ರಿಟ್ಟೊ ಪ್ರಭು (ಸಂಗೀತ), ಮಂಜಮ್ಮ ಜೋಗತಿ(ಕಲೆ) ಪ್ರಶಸ್ತಿಗೆ ಆಯ್ಕೆಯಾದ ಇತರರು.ಸಂದೇಶ ವಿಶೇಷ ಪ್ರಶಸ್ತಿಗೆ ಸ್ನೇಹಸದನ್, ಜೀವದಾನ್ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ನಾ.ಡಿಸೋಜ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿ ₹ 25 ಸಾವಿರ ನಗದು ಒಳಗೊಂಡಿದೆ. ಜನವರಿ 22ರಂದು ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.