ADVERTISEMENT

ಹೊಸ್ತೋಟ ಭಾಗವತರ ಆರೋಗ್ಯ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 18:59 IST
Last Updated 24 ಡಿಸೆಂಬರ್ 2019, 18:59 IST
ಹೊಸ್ತೋಟ ಮಂಜುನಾಥ ಭಾಗವತ
ಹೊಸ್ತೋಟ ಮಂಜುನಾಥ ಭಾಗವತ   

ಶಿರಸಿ: ಅನಾರೋಗ್ಯದಿಂದ ಬಳಲುತ್ತಿರುವ ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸೋಂದಾ ಹಳೆಯೂರಿನ ಶ್ರೀಪಾದ ಜೋಶಿಯವರ ಮನೆಯಲ್ಲಿ ಭಾಗವತರಿಗೆ ಆರೈಕೆ ಮಾಡಲಾಗುತ್ತಿದೆ. ವೈದ್ಯರು ನಿತ್ಯ ಭೇಟಿ ನೀಡಿ, ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ.

ಯಕ್ಷಗಾನವೇ ಬದುಕಾಗಿರುವ ಭಾಗವತರ ‘ಯಕ್ಷಗಾನ–ಶಿಕ್ಷಣ–ಲಕ್ಷಣ’ ಕೃತಿ ಡಿ.8ರಂದು ತಾಲ್ಲೂಕಿನ ಕೆರೆಕೊಪ್ಪದಲ್ಲಿ ಬಿಡುಗಡೆಯಾಗಿತ್ತು. ಅನಾರೋಗ್ಯದ ನಡುವೆಯೂ ಭಾಗವತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT