ಚಿಕ್ಕಮಗಳೂರು: ‘ಸ್ವಪಕ್ಷದ ನಾಯಕರನ್ನು ಸೋಲಿಸುವ ಅನ್ಯಾಯವನ್ನು ಮೋದಿ ಮಾಡಿಲ್ಲ. ಮೋದಿ ನ್ಯಾಯ ಕೊಡಿ ಎಂದು ಕೇಳುವ ಸಿದ್ದರಾಮಯ್ಯ ಏನು ಬಯಸುತ್ತಿದ್ದಾರೋ ಗೊತ್ತಿಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮನ್ನು ಸೋಲಿಸಿದವರನ್ನು ಸೋಲಿಸಿ ನ್ಯಾಯ ಕೊಡಿ ಎಂದು ಕೇಳಬೇಕು. ನ್ಯಾಯ ಕೊಡಿ ಎಂದು ಸಿದ್ದರಾಮಯ್ಯ ಕೇಳುವಂತಿಲ್ಲ’ ಎಂದು ಕುಟುಕಿದರು.
‘ಸಮಾಜವಾದಿ ಹೆಸರಿಲ್ಲಿ ಮಜಾವಾದಿಯಾಗಿದ್ದಕ್ಕೆ, ಪಿಎಫ್ಐ, ಎಸ್ಡಿಪಿಐ ಸಂಘಟನೆಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿದ್ದಕ್ಕೆ, ‘ರಿಡೂ’ ಹೆಸರಿನಲ್ಲಿ ಹಗರಣ ಮಾಡಿದ್ದಕ್ಕೆ ಜನ ನಿಮಗೆ ಶಿಕ್ಷೆ ಕೊಟ್ಟಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.