ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 213 ಕೊರೊನಾ ಸೋಂಕಿತ ಹೊಸಪ್ರಕರಣಗಳು ವರದಿಯಾಗಿವೆ. ಮಾರಕ ಸೋಂಕಿಗೆ ಐವರು ಮೃತಪಟ್ಟಿದ್ದಾರೆ.
ಈ ದಿನ ಸೋಂಕಿನಿಂದ 370 ಜನ ಚೇತರಿಸಿಕೊಂಡಿದ್ದು, ಇನ್ನೂ 7096 ಸಕ್ರಿಯ ಪ್ರಕರಣಗಳಿವೆ.ಇದುವರೆಗೆ ರಾಜ್ಯದಲ್ಲಿ ಕೋವಿಡ್ನಿಂದಾಗಿ38,174 ಜನ ಮೃತಪಟ್ಟಂತಾಗಿದೆ.
ಇದುವರೆಗೆ ರಾಜ್ಯದಲ್ಲಿ 29,93,352 ಜನಕ್ಕೆ ಸೋಂಕು ತಗುಲಿದೆ. ಶೇಕಡಾವಾರು ಸೋಂಕಿನ ಪ್ರಮಾಣಶೇ 0.26 ರಲ್ಲಿದ್ದರೇ,ಶೇಕಡಾವಾರು ಮರಣ ಪ್ರಮಾಣ ಶೇ 2.34 ರಷ್ಟಿದೆ.
ಕರ್ನಾಟಕದಲ್ಲಿ ಇದುವರೆಗೆ7,01,55,292 ಕೋವಿಡ್ ಲಸಿಕೆ ಡೋಸ್ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.