ADVERTISEMENT

ನಿವೃತ್ತಿ ವಯಸ್ಸು 65 ಸರ್ಕಾರಕ್ಕೆ ಹೊರೆ ಎಂದ ಹೈಕೋರ್ಟ್‌: ಮೇಲ್ಮನವಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 4:19 IST
Last Updated 11 ಜೂನ್ 2022, 4:19 IST
high court
high court   

ಬೆಂಗಳೂರು: ‘ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 65ಕ್ಕೆ ನಿಗದಿಪಡಿಸುವು ದರಿಂದ ಖಜಾನೆ ಹಾಗೂ ಇತರ ರಿಗೆ ಉದ್ಯೋಗಾವಕಾಶಗಳ ಮೇಲೆ ನೇರ ಪರಿಣಾಮ ಉಂಟಾಗುತ್ತದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ನನ್ನ ಸೇವೆಯನ್ನು 62 ವರ್ಷಗಳ ಬದಲಿಗೆ 65 ವರ್ಷದವರೆಗೆ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಕೃಷಿ ಕಾಲೇಜಿನ ಮಾಜಿ ಡೀನ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರಿದ್ದ ವಿಭಾಗೀಯ ನ್ಯಾಯಪೀಠ ತಿರಸ್ಕರಿಸಿದೆ.

‘ಹಳೆಯ ರಕ್ತವನ್ನು ಉಳಿಸಿಕೊಳ್ಳುವುದು ಅಥವಾ ತಾಜಾ ರಕ್ತವನ್ನು ತುಂಬುವುದು ರಾಜ್ಯ ಸರ್ಕಾರ ಅಥವಾ ವಿಶ್ವವಿದ್ಯಾನಿಲಯಗಳ ಬುದ್ಧಿವಂತಿಕೆಗೆ ಬಿಟ್ಟದ್ದು. ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಸಾವಿರಾರು ಉದ್ಯೋಗಿಗಳು ಇದ್ದಾರೆ. ಅರ್ಜಿದಾರರ ಈಗಿನ ಪ್ರಾರ್ಥನೆಯನ್ನು ಮನ್ನಿಸಿದ್ದೇ ಆದರೆ, ಈ ಎಲ್ಲಾ ಉದ್ಯೋಗಿಗಳೂ ಮೂರು ವರ್ಷಗಳ ಹೆಚ್ಚುವರಿ ಅವಧಿಗೆ ಮುಂದುವರಿಯುತ್ತಾರೆ. ಆಗ ಹೊಸ ನೇಮಕಾತಿಗಳಿಗೆ ಖಾಲಿ ಹುದ್ದೆ‌‌ಗಳೇ ಉಳಿಯುವುದಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

‘ಪ್ರಾಧ್ಯಾಪಕರು, ಶಿಕ್ಷಕರಂತಹ ಸಾರ್ವಜನಿಕ ಸೇವಕರು ಯಾವ ವಯಸ್ಸಿ ನಲ್ಲಿ ನಿವೃತ್ತರಾಗಬೇಕು ಎಂಬುದು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ವಿಚಾರ. ಒಬ್ಬ ನೌಕರನಸಂಬಳದ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಹೀಗಾಗಿ, ಹಣಕಾಸು ಮತ್ತು ಇತರ ಅಂಶಗಳ ಮುಖೇನ ನಿರ್ಧಾರ ತೆಗೆದುಕೊಳ್ಳುವ ವಿಷಯ ಗಳಲ್ಲಿ ನ್ಯಾಯಾಲಯಗಳು ಸುಲಭವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ವಿವರಿಸಿದೆ.

ಮನವಿ ಏನಿತ್ತು?:ಹನುಮನಮಟ್ಟಿಯ ಕೃಷಿ ವಿಜ್ಞಾನ ಕಾಲೇಜಿನ ಮಾಜಿ ಡೀನ್ ಡಾ. ಚಿದಾನಂದ್ ಪಿ ಮನ್ಸೂರ್ ಅವರು,ನಿವೃತ್ತಿಯ ವಯಸ್ಸನ್ನು 62 ವರ್ಷ ಎಂದು ಸೂಚಿಸುವ ವಿವಿ ಕಾಯ್ದೆ–1964ರ ಕಲಂ 30(8) ಅನ್ನು ಪ್ರಶ್ನಿಸಿ ಹೈಕೋರ್ಟ್‌ಮೆಟ್ಟಿಲೇರಿದ್ದರು. ಅಂತೆಯೇ, ಯುಜಿಸಿ ನಿಯಮಾವಳಿ ಅನುಸಾರ 65 ವರ್ಷ ವಯಸ್ಸಿನವರೆಗೆ ಸೇವೆಯಲ್ಲಿ ಮುಂದುವರಿಯಲು ಿರ್ದೇಶಿಸಬೇಕು ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.