ಶಿವಮೊಗ್ಗ: ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯಲ್ಲಿ ಮಂಗನಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಸಾಗರ ತಾಲ್ಲೂಕು ಅರಳಗೋಡು ಸಮೀಪದ ದೊಂಬಿಕೈನ ಲಕ್ಷ್ಮಿದೇವಿ ಶುಕ್ರವಾರ ನಿಧನರಾದರು.
ಕಾಯಿಲೆಗೆ ಇದುವರೆಗೂ 10 ಜನರು ಮೃತಪಟ್ಟಿದ್ದಾರೆ.
ನಾಲ್ಕು ಮಂಗಗಳ ಮೃತದೇಹ ಪತ್ತೆ: ತಳಕಳಲೆ ಸಮೀಪದ ಕೆಪಿಸಿ ಗೆಟ್ ಬಳಿ ಎರಡು ಸತ್ತ ಮಂಗಗಳು ಪತ್ತೆಯಾಗಿರುವುದು ಅಲ್ಲಿನ ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದೆ. ಶರಾವತಿ ಕಣಿವೆ ಯೋಜನೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಹೊಸನಗರ ತಾಲ್ಲೂಕಕಿನಲ್ಲೂ ಎರಡು ಸತ್ತ ಮಂಗಗಗಳು ಪತ್ತೆಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.