ADVERTISEMENT

ಪೀಠಾಧಿಪತಿ: ಸಿಗದ ಸ್ಪಷ್ಟತೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 19:06 IST
Last Updated 20 ಅಕ್ಟೋಬರ್ 2018, 19:06 IST

ಗದಗ: ಸಿದ್ಧಲಿಂಗ ಸ್ವಾಮೀಜಿ ಅವರ ಉತ್ತರಾಧಿಕಾರಿ ನೇಮಕ್ಕೆ ಸಂಬಂಧಿಸಿದಂತೆ ಮಠದ ಆಡಳಿತ ಮಂಡಳಿ ಶನಿವಾರ ತಡರಾತ್ರಿಯಾದರೂ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಮಠದ 20ನೇ ಪೀಠಾಧಿಪತಿ ಯಾರಾಗುತ್ತಾರೆ ಎನ್ನುವ ಗೊಂದಲ ಭಕ್ತರನ್ನೂ ಕಾಡುತ್ತಿದೆ. ಉತ್ತರಾಧಿಕಾರಿ ಸಂಬಂಧ ಸಿದ್ಧಲಿಂಗ ಸ್ವಾಮೀಜಿ ಅವರೂ ಯಾರೊಂದಿಗೂ ಏನನ್ನು ಹಂಚಿಕೊಂಡಿರಲಿಲ್ಲ.

‘ಅವರ ಶಕ್ತಿಯನ್ನು ನಾವು ಯಾರೂ ತುಂಬಲು ಆಗುವುದಿಲ್ಲ. ನಮಗೆ ಏನೂ ಗೊತ್ತಾಗುತ್ತಲೂ ಇಲ್ಲ’ ಎಂದು ಮುಂಡರಗಿ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

‘ಉತ್ತರಾಧಿಕಾರಿ ನೇಮಕವಾಗದ ಕಾರಣ, ಶಿವಮೊಗ್ಗ ಜಿಲ್ಲೆ ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಲಿಂಗಾಯತ ವಿಧಿ ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.