ADVERTISEMENT

ಕಣ್ಣೀರಿಟ್ಟ ಶಿವರಾಮೇಗೌಡ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 17:55 IST
Last Updated 22 ಅಕ್ಟೋಬರ್ 2018, 17:55 IST

ಮಂಡ್ಯ: ‘22 ವರ್ಷಗಳಿಂದ ನಿರಂತರವಾಗಿ ಸೋಲು ಕಂಡಿದ್ದೇನೆ. ನನ್ನ ನಂತರ ಬಂದವರೆಲ್ಲರೂ ಗೆಲುವು ಸಾಧಿಸಿದ್ದಾರೆ. ಸೋಲುಗಳಿಂದ ರಾಜಕೀಯವಾಗಿ ಬಳಲಿದ್ದೇನೆ. ಈ ಚುನಾವಣೆಯಲ್ಲಾದರೂ ನನ್ನನ್ನು ಗೆಲ್ಲಿಸಿ’ ಎಂದು ಲೋಕಸಭೆ ಉಪ
ಚುನಾವಣೆ ಜೆಡಿಎಸ್‌ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡ ಬಿಕ್ಕಿ ಬಿಕ್ಕಿ ಅತ್ತರು.

ನಾಗಮಂಗಲ ಪಟ್ಟಣದಲ್ಲಿ ಸೋಮವಾರ ನಡೆದ ಜೆಡಿಎಸ್‌– ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದರು.

‘ಪತ್ರಕರ್ತ ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಕೇಸಿಗೂ ನನಗೂ ಯಾವುದೇ ಸಂಬಂಧವಿಲ್ಲ. ಕೋರ್ಟ್‌ನಲ್ಲೇ ಖುಲಾಸೆಯಾಗಿದ್ದೇನೆ ’ ಎಂದರು.

ADVERTISEMENT

ಮುಖಂಡರ ಗೈರು: ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ, ಉಪ ಚುನಾವಣೆ ಟಿಕೆಟ್‌ ವಂಚಿತರಾದ ಲಕ್ಷ್ಮಿ ಅಶ್ವಿನ್‌ಗೌಡ ಸಭೆಗೆ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.