ADVERTISEMENT

ರೈಲಿಂದ ಬಿದ್ದು ವೈದ್ಯ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 20 ಮೇ 2022, 15:56 IST
Last Updated 20 ಮೇ 2022, 15:56 IST
ವೆಂಕಟೇಶ
ವೆಂಕಟೇಶ   

ರಾಯಚೂರು: ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಬಿದ್ದು, ಬೆಂಗಳೂರಿನಲ್ಲಿ ವೈದ್ಯಕೀಯ ಓದುತ್ತಿದ್ದ ವಿದ್ಯಾರ್ಥಿ ವೆಂಕಟೇಶ್‌ (22) ಧಾರುಣ ಸಾವನ್ನಪ್ಪಿದ ಘಟನೆ ನಗರದ ರೈಲು ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.

ನಗರದ ಜಹೀರಾಬಾದ್‌ ನಿವಾಸಿಯಾಗಿದ್ದು, ತಂದೆ ಸಂಪತಕುಮಾರ್‌ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಶಿರಸ್ತೆದಾರರಾಗಿದ್ದಾರೆ. ಅಕ್ಕನ ಮದುವೆಯಲ್ಲಿ ಪಾಲ್ಗೊಳ್ಳಲು ಕೆ.ಕೆ.ಎಕ್ಸ್‌ಪ್ರೆಸ್‌ ರೈಲಿನಲ್ಲಿ ರಾಯಚೂರಿಗೆ ಬಂದಿದ್ದ ವೇಳೆ ನಸುಕಿನಲ್ಲಿ ದುರಂತ ನಡೆದಿದೆ.

ನಿದ್ರೆಯಲ್ಲಿದ್ದರಿಂದ ನಿಲ್ದಾಣ ಬಂದಿರುವುದು ಗೊತ್ತಾಗಿಲ್ಲ. ರೈಲು ಚಲಿಸುವಾಗ ಎಚ್ಚರಗೊಂಡು ಇಳಿದಿದ್ದು ಸಾವಿಗೆ ಕಾರಣ. ರಾಯಚೂರು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.