ADVERTISEMENT

ಮೇಕೆದಾಟು: 4 ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸಿ– ‘ಸುಪ್ರೀಂ’ ಸೂಚನೆ

ತಮಿಳುನಾಡು ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 7:50 IST
Last Updated 12 ಡಿಸೆಂಬರ್ 2018, 7:50 IST
   

ನವದೆಹಲಿ: ಮೇಕೆದಾಟು ಯೋಜನೆ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದ ಒಪ್ಪಿಗೆ‌ ವಿರೋಧಿಸಿದ ತಮಿಳುನಾಡಿನಅರ್ಜಿ ವಿಚಾರಣೆ ನಡೆಸಿ,ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ನೇತೃತ್ವದ ಪೀಠದಿಂದ ತಮಿಳುನಾಡು ಅರ್ಜಿ ವಿಚಾರಣೆ ನಡೆದಿದೆ. ನ್ಯಾಯಂಗ ನಿಂಧನೆ ಅರ್ಜಿ ಬಗ್ಗೆ ಸದ್ಯ ಯಾವುದೇ ವಿಚಾರಣೆಯನ್ನು ಪೀಠ ನಡೆಸಿಲ್ಲ.

ಮೇಕೆದಾಟು ಯೋಜನೆ ಕುರಿತು ಅವಸರ ತೋರುವ‌‌ ಅಗತ್ಯವಿಲ್ಲ. ಕೇವಲ ಪರಿಷ್ಕೃತ ವಿಸ್ತೃತ ‌ಯೋಜನಾ ವರದಿಯನ್ನು ಮಾತ್ರ ಆಯೋಗ ಕೇಳಿದೆ. ಪ್ರಾಥಮಿಕ ವರದಿಗೆ ಸಮ್ಮತಿ ನೀಡಿರುವುದು ಅಂತಿಮವಲ್ಲಎಂದ ನ್ಯಾಯಪೀಠ ಹೇಳಿದೆ.

ADVERTISEMENT

ಕರ್ನಾಟಕ ಆಯೋಗಕ್ಕೆ ಅಂತಿಮ ವರದಿ ಸಲ್ಲಿಸಿದ ಬಳಿಕ ತಕರಾರು ಇದ್ದಲ್ಲಿ ಸಲ್ಲಿಸಲುತಮಿಳುನಾಡಿಗೆ ಸುಪ್ರೀಂ ಕೋರ್ಟ್‌ಸೂಚನೆ ನೀಡಿದೆ.

ಮೇಕೆದಾಟು‌ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಹಾನಿ ಇಲ್ಲ ಎಂದು ‌ಕರ್ನಾಟಕದ‌ ವಕೀಲರು ಪೀಠಕ್ಕೆ ತಿಳಿಸಿದರು. ನಾಲ್ಕು ವಾರಗಳ ನಂತರ ‌ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.