ದಾವಣಗೆರೆ:ಸಾಲ ಕೊಡಿಸುವುದಾಗಿ ಮಂಚಕ್ಕೆ ಕರೆದ ಖಾಸಗಿ ಬ್ಯಾಂಕ್ನ ಮ್ಯಾನೇಜರ್ಗೆ ಮಹಿಳೆ ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿದ್ದಾರೆ.
ಡಿಎಚ್ಎಫ್ಎಲ್ ಮ್ಯಾನೇಜರ್ ದೇವಣ್ಣ ಏಟು ತಿಂದ ಅಸಾಮಿ. ಈತ ಮಹಿಳೆಯೊಬ್ಬರಿಗೆ ಸಾಲ ನೀಡುವುದಾಗಿ ತಿಳಿಸಿ ಪಲ್ಲಂಗಕ್ಕೆ ಕರೆದಿದ್ದಾನೆ.
ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿಯೇ ಮಹಿಳೆ ಇದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ. ಚಪ್ಪಲಿ ಮತ್ತು ಮರದ ತುಂಡಿನಿಂದ ಹೊಡೆದು ಮಹಿಳಾ ಪೊಲೀಸರಿಗೆ ಒಪ್ಪಿಸಿದ್ದಾರೆ.
‘ಮೀಟೂ’...
ಲೈಂಗಿಕ ಕಿರುಕುಳಕ್ಕೆ ಒಳಗಾದ ಅನೇಕರು ತಮ್ಮ ಮನಸಿಗೆ ಆಗಿರುವ ಘಾಸಿಯನ್ನು ‘ಮಿಟೂ’ ಆಂದೋಲನದ ಮೂಲಕ ಅಭಿವ್ಯಕ್ತಿಸುತ್ತಿದ್ದಾರೆ. ಬಾಲಿವುಡ್, ರಾಜಕೀಯ, ಕ್ರೀಡೆ, ರಾಷ್ಟ್ರೀಯ ಮಾಧ್ಯಮಗಳ ನಂತರ ಇದೀಗ ಕನ್ನಡ ಚಿತ್ರರಂಗದಲ್ಲಿ ಮೀಟೂ ಸದ್ದು ಮಾಡುತ್ತಿದೆ. ಚಿತ್ರರಂಗದಲ್ಲಿ ಈವರೆಗೆ ಅನುಭವಿಸಿದ ತೊಂದರೆಗಳನ್ನು ಒಟ್ಟುಗೂಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂಗೀತಾ ಭಟ್ ಇಂದು ಪತ್ರ ಬಹಿರಂಗ ಪಡಿಸಿದ್ದಾರೆ. ಇದರ ಬೆನ್ನಲ್ಲೇ ಇಂಥದ್ದೊಂದು ಘಟನೆಗೆ ಮಹಿಳೆಯೊಬ್ಬರು ವ್ಯಕ್ತಿಗೆ ಥಳಿಸುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.