ADVERTISEMENT

ಆಸ್ತಿಗಾಗಿ ತಂದೆ, ತಾಯಿ, ಅಕ್ಕನ ಕೊಲೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 17:25 IST
Last Updated 11 ಮಾರ್ಚ್ 2020, 17:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಡಚಣ(ವಿಜಯಪುರ): ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಉಮದಿ ಗ್ರಾಮದಲ್ಲಿ ಬುಧವಾರ ಸಿದ್ದಪ್ಪ ಗುರಲಿಂಗಪ್ಪ ಅರಕೇರಿ ಎಂಬಾತ ಆಸ್ತಿಗಾಗಿ ತಂದೆ, ತಾಯಿ ಹಾಗೂ ಅಕ್ಕನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ, ಬಳಿಕ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

ತಂದೆ ಗುರಲಿಂಗಪ್ಪ ಅಣ್ಣಪ್ಪ ಅರಕೇರಿ (82), ತಾಯಿ ನಾಗವ್ವಾ ಗುರಲಿಂಗಪ್ಪ ಅರಕೇರಿ (75) ಹಾಗೂ ಸಹೋದರಿ ಸಮುದ್ರಾಬಾಯಿ ಶಿವಲಿಂಗಪ್ಪ ಬಿರಾದಾರ (62) ಕೊಲೆಯಾದವರು.

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಕಲಹವಿತ್ತು. ಇದೇ ವಿಷಯಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಆಗ ಸಿದ್ಧಪ್ಪ ಮೂವರನ್ನೂ ಕೊಲೆ ಮಾಡಿದ್ದಾನೆ ಎಂದು ಉಮದಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.