ADVERTISEMENT

ಶಿಮ್ಲಾದಲ್ಲಿದ್ದ ಮಹಿಳೆ ರಾಜ್ಯಕ್ಕೆ ವಾಪಸ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 18:44 IST
Last Updated 2 ಆಗಸ್ಟ್ 2018, 18:44 IST
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಪದ್ಮಾ ಅವರನ್ನು ಮಾತನಾಡಿಸಿದರು – ‍ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಪದ್ಮಾ ಅವರನ್ನು ಮಾತನಾಡಿಸಿದರು – ‍ಪ್ರಜಾವಾಣಿ ಚಿತ್ರ   

ಬೆಂಗಳೂರು: ಎರಡು ವರ್ಷಗಳಿಂದ ಶಿಮ್ಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರಿನ ಪದ್ಮಾ ಎಂಬುವರನ್ನು ಅಧಿಕಾರಿಗಳ ತಂಡವು ರಾಜ್ಯಕ್ಕೆ ವಾಪಸ್‌ ಕರೆತಂದಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಮಕನಪಳ್ಳಿ ಪಾಳ್ಯ ಕಮಲಾಪುರದ ಪದ್ಮಾ, ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು. ಗ್ರಾಮದಿಂದ ನಾಪತ್ತೆಯಾಗಿದ್ದ ಅವರು, ಶಿಮ್ಲಾದಿಂದ 217 ಕಿ.ಮೀ ದೂರವಿರುವ ಕಣಿವೆಯಲ್ಲಿ ಪತ್ತೆಯಾಗಿದ್ದರು. ಅವರನ್ನು ಗಮನಿಸಿದ್ದ ಪೊಲೀಸರು, ಸ್ಥಳೀಯ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು.

ತಮ್ಮೂರು ಮೈಸೂರು ಎಂಬುದಾಗಿ ಇತ್ತೀಚೆಗಷ್ಟೇ ವೈದ್ಯರಿಗೆ ಹೇಳಿದ್ದ ಪದ್ಮಾ, ವಾಪಸ್‌ ಕಳುಹಿಸುವಂತೆ ಕೋರಿದ್ದರು. ಆ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮೈಸೂರಿನ ಅಧಿಕಾರಿಗಳ ತಂಡವನ್ನು ಶಿಮ್ಲಾಕ್ಕೆ ಕಳುಹಿಸಿ ಮಹಿಳೆಯು ವಾಪಸ್‌ ಬರುವಂತೆ ಮಾಡಿದ್ದಾರೆ.

ADVERTISEMENT

ಅಧಿಕಾರಿಗಳ ಜತೆ ವಿಧಾನಸೌಧಕ್ಕೆ ಗುರುವಾರ ಬಂದಿದ್ದ ಮಹಿಳೆ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು. ಕುಶಲೋಪರಿ ವಿಚಾರಿಸಿದ ಮುಖ್ಯಮಂತ್ರಿ, ಮಹಿಳೆಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.