ADVERTISEMENT

ದೋಣಿಮಲೈ: ಅದಿರು ಗಣಿಗಾರಿಕೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 17:18 IST
Last Updated 18 ಜುಲೈ 2019, 17:18 IST
   

ಬೆಂಗಳೂರು:ಎಂಟು ತಿಂಗಳಿನಿಂದ ಬಳ್ಳಾರಿ ಜಿಲ್ಲೆಯ ದೋಣಿಮಲೈ ಕಬ್ಬಿಣ ಅದಿರು ಗಣಿ ಪ್ರದೇಶದಲ್ಲಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆಯನ್ನು ಕರ್ನಾಟಕ ಹೈಕೋರ್ಟ್‌ ನಿರ್ಧಾರದ ನಂತರ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಪುನರಾರಂಭಸಲಿದೆ.

ಗುತ್ತಿಗೆ ಪರವಾನಗಿನವೀಕರಿಸಬೇಕು ಮತ್ತು ದೋಣಿಮಲೈ ಗಣಿಯಲ್ಲಿ ಗಣಿಗಾರಿಕೆ ಕೈಗೆತ್ತಿಕೊಳ್ಳಲು ಅನುಮತಿ ನೀಡಬೇಕು ಎಂದು ಎನ್‌ಎಂಡಿಸಿ ರಾಜ್ಯ ಸರ್ಕಾರವನ್ನು ಕೋರಿತ್ತು.ಗಣಿಗಾರಿಕೆ ಪುನರಾರಂಭಿಸುವುದರಿಂದ ರಾಜ್ಯದಲ್ಲಿನ ಉಕ್ಕು ಕಾರ್ಖಾನೆಗಳಿಗೆ ತೀರಾ ಅಗತ್ಯವಾಗಿರುವ ಕಬ್ಬಿಣದ ಅದಿರು ಪೂರೈಸಬಹುದು. ಆ ಮೂಲಕ, ಎನ್‌ಎಂಡಿಸಿ ಮತ್ತು ರಾಜ್ಯ ಸರ್ಕಾರಕ್ಕೆ ಉಂಟಾಗುವ ನಷ್ಟವನ್ನು ಕಡಿಮೆಗೊಳಿಸಬಹುದು ಎಂದು ಹೇಳಿತ್ತು.

‘ದೀರ್ಘಕಾಲದಿಂದ ಕಾಯುತ್ತಿದ್ದ ಕ್ಷಣ ಬಂದಿದೆ. ಗಣಿಗಾರಿಕೆ ಪುನರಾರಂಭ ರಾಜ್ಯದ ಉಕ್ಕು ಉತ್ಪಾದಕರಿಗೆ, ಹೂಡಿಕೆ
ದಾರರಿಗೆ, ಗಣಿ ಉದ್ಯಮಿಗಳಿಗೆ, ಗ್ರಾಹಕರಿಗೆ ಮತ್ತು ನೌಕರರಿಗೆ ಸಂತಸ ತಂದಿದೆ’ ಎಂದು ಎನ್‌ಎಂಡಿಸಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎನ್. ಬೈಜೇಂದ್ರಕುಮಾರ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.