ಬೆಂಗಳೂರು:ಅಲ್ಕೈದಾ ಉಗ್ರ ಸಂಘಟನೆ ಸೇರಲು ಹೊರಟಿದ್ದ ಆರೋಪದಡಿ ಬಂಧಿಸಲಾಗಿರುವ ಅಖ್ತರ್ ಹುಸೇನ್ ಲಷ್ಕರ್ (24) ಜೊತೆ ಒಡನಾಟ ಹೊಂದಿದ್ದ ಜುಬಾ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
'ಅಖ್ತರ್ ಹಾಗೂ ಜುಬಾ, ಇಬ್ಬರು ಅಲ್ಕೈದಾ ಸೇರಲು ಹೊರಟಿದ್ದ ಮಾಹಿತಿ ಇತ್ತು. ಬೆಂಗಳೂರಿನಲ್ಲಿ ಅಖ್ತರ್ನನ್ನು ಭಾನುವಾರವೇ ಬಂಧಿಸಲಾಗಿದೆ. ಇದೀಗ, ತಮಿಳುನಾಡಿನಲ್ಲಿ ಜುಬಾನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತರಲಾಗಿದೆ' ಎಂದು ಸಿಸಿಬಿ ಮೂಲಗಳು ಹೇಳಿವೆ.
'ತಮಿಳುನಾಡಿನ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಜುಬಾ ಕೆಲಸ ಮಾಡುತ್ತಿದ್ದ. ಟೆಲಿಗ್ರಾಂ ಹಾಗೂ ಫೇಸ್ಬುಕ್ ಮೂಲಕ ಅಲ್ಕೈದಾ ಉಗ್ರರ ಜೊತೆ ಮಾತುಕತೆ ನಡೆಸುತ್ತಿದ್ದರೆಂದು ಗೊತ್ತಾಗಿದೆ. ಜುಬಾನ ವಿಚಾರಣೆ ಮುಂದುವರಿಸಲಾಗಿದೆ' ಎಂದೂ ತಿಳಿಸಿವೆ.
ಇದನ್ನೂ ಓದಿ..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.