ADVERTISEMENT

ಬೆಂಗಳೂರು: ಬುದ್ಧಿವಾದ ಹೇಳಿದ್ದಕ್ಕೆ ಇರಿದು ಕೊಲೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 22:09 IST
Last Updated 18 ಆಗಸ್ಟ್ 2022, 22:09 IST
   

ಬೆಂಗಳೂರು: ‘ದುಶ್ಚಟ ಮಾಡಿ ಸ್ನೇಹಿತ ರನ್ನು ಹಾಳು ಮಾಡಬೇಡ’ ಎಂದು ಬುದ್ಧಿವಾದ ಹೇಳಿದ್ದಕ್ಕೆ ಅಜೀಂವುಲ್ಲಾ (43) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ರಾಜಗೋಪಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹೆಗ್ಗನಹಳ್ಳಿಯ ಮಾರುತಿನಗರ ನಿವಾಸಿ ಅಜೀಂವುಲ್ಲಾ, ಜಾತ್ರೆಗಳಲ್ಲಿ ರಾಟೆ ಚಕ್ರ (ಜೋಕಾಲಿ) ನಿರ್ವಹಣೆ ಕೆಲಸ ಮಾಡುತ್ತಿದ್ದರು. ಅವರನ್ನು ಬುಧವಾರ ರಾತ್ರಿ ಕೊಲೆ ಮಾಡಲಾಗಿದ್ದು, ಪರಿಚಯಸ್ಥ ಯುವಕನೇ ಕೃತ್ಯ ಎಸಗಿ ಪರಾರಿಯಾಗಿರುವ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಯುವಕ, ಮದ್ಯಪಾನ, ಧೂಮಪಾನ ಮಾಡಿ, ಸ್ನೇಹಿತರಿಗೂ ದುಶ್ಚಟ ಮಾಡುವಂತೆ ಪ್ರಚೋದಿಸುತ್ತಿದ್ದ. ರಸ್ತೆಯಲ್ಲಿ ಹೊರಟಿದ್ದ ಯುವಕನನ್ನು ತಡೆದಿದ್ದ ಅಜೀಂವುಲ್ಲಾ, ‘ಸ್ನೇಹಿತರನ್ನು ಹಾಳು ಮಾಡಬೇಡಿ’ ಎಂದು ಬುದ್ಧಿವಾದ ಹೇಳಿ ಕಪಾಳಕ್ಕೆ ಹೊಡೆದಿದ್ದರು. ಸಿಟ್ಟಾಗಿದ್ದ ಯುವಕ, ಮನೆಗೆ ಹೋಗಿ ತನ್ನ ತಂದೆ ಕರೆದುಕೊಂಡು ಬಂದಿದ್ದ. ಅದೇ ಸಂದರ್ಭದಲ್ಲೇ ಯುವಕ, ತನ್ನ ಬಳಿಯ ಚಾಕುವಿನಿಂದ ಅಜೀಂವುಲ್ಲಾ ಎದೆಗೆ ಇರಿದಿದ್ದ’ ಎಂದೂ ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.