ಬೆಂಗಳೂರು: ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಸ್. ಮೂರ್ತಿ ಅವರ ಆಡಳಿತಾತ್ಮಕ ಅಧಿಕಾರಗಳಿಗೆ ಕತ್ತರಿ ಪ್ರಯೋಗಿಸಿದ್ದ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್, ₹ 50 ಸಾವಿರದ ಒಳಗಿನ ವೆಚ್ಚಗಳಿಗೆ ಮಂಜೂರಾತಿ ನೀಡುವ ಅಧಿಕಾರವನ್ನು ಸಚಿವಾಲಯದ ನಿರ್ದೇಶಕರಿಗೆ ನೀಡಿದ್ದಾರೆ.
ವಾಹನಗಳ ದುರಸ್ತಿಗೆ ಎಲ್ಲ ದಾಖಲೆಗಳನ್ನು ನಿರ್ದೇಶಕರು ಪರಿಶೀಲನೆ ನಡೆಸಬೇಕು. ದುರಸ್ತಿ ಅಗತ್ಯವಿದ್ದರೆಕಾರ್ಯಾದೇಶ ನೀಡಬಹುದು. ₹ 50 ಸಾವಿರದೊಳಗಿನ ವೆಚ್ಚಕ್ಕೆ ಅವರ ನೀಡಬಹುದು.
ಸಚಿವಾಲಯದಲ್ಲಿ ಜರಗುವ ವಿವಿಧ ಸಮಿತಿಗಳ ಸಭೆಗಳು, ತರಬೇತಿಗಳು ಹಾಗೂ ಶಿಷ್ಟಾಚಾರಕ್ಕೆ ಸಂಬಂಧಿಸಿದ ವೆಚ್ಚಗಳು ₹ 50 ಸಾವಿರಕ್ಕಿಂತ ಕಡಿಮೆ ಇದ್ದರೆ ನಿರ್ದೇಶಕರೇ ಒಪ್ಪಿಗೆ ನೀಡಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.