ADVERTISEMENT

ಉದ್ಯಮಿಗಳ ಜತೆ ಸಭೆ

ಬಳ್ಳಾರಿಗೆ ರುವಾಂಡ ಹೈಕಮೀಷನರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 19:18 IST
Last Updated 5 ನವೆಂಬರ್ 2018, 19:18 IST
ಅರ್ನೆಸ್ಟ್ ರಾಮಿಕೋ
ಅರ್ನೆಸ್ಟ್ ರಾಮಿಕೋ   

ಬಳ್ಳಾರಿ:ಆಫ್ರಿಕಾದ ರುವಾಂಡ ದೇಶದ ಹೈಕಮಿಷನರ್‌ ಅರ್ನೆಸ್ಟ್ ರಾಮಿಕೋ ಅವರು ನಗರದಲ್ಲಿ ಸೋಮವಾರ ರಾತ್ರಿ ಜಿಲ್ಲೆಯ ಉದ್ಯಮಿಗಳೊಂದಿಗೆಸಭೆ ನಡೆಸಿ, ತಮ್ಮ ದೇಶದಲ್ಲಿ ಬಂಡವಾಳ ಹೂಡುವಂತೆ ಮನವಿ ಮಾಡಿದರು.

ಇಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಜಿಲ್ಲೆಯ ಹದಿನೈದು ಮಂದಿ ಬಂಡವಾಳ ಹೂಡಲು ಸಿದ್ಧರಿರುವುದು ಸ್ವಾಗತಾರ್ಹ ವಿಚಾರ’ ಎಂದರು.

‘ಭಾರತದ ಮೆಟ್ರೋಪಾಲಿಟನ್‌ ನಗರಗಳಲ್ಲಿ ಮಾತ್ರ ನಾವು ಉದ್ಯಮಿಗಳನ್ನು ಭೇಟಿ ಮಾಡುತ್ತಿತ್ತು. ಈಗ ಬಳ್ಳಾರಿಯಂಥ ನಗರಗಳಿಗೂ ಭೇಟಿ ಮಾಡಿ ಉದ್ಯಮಿಗಳನ್ನು ಸೆಳೆಯಲು ಉದ್ದೇಶಿಸಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.