ADVERTISEMENT

ಶ್ರೀಗಂಧದ ಮ್ಯೂಸಿಯಂಗೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 17:31 IST
Last Updated 24 ಜನವರಿ 2021, 17:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮೈಸೂರು: ದೇಶದಲ್ಲಿಯೇ ಮೊದಲು ಎನಿಸಿರುವ ಇಲ್ಲಿನಶ್ರೀಗಂಧ ಮ್ಯೂಸಿಯಂಗೆ ಸೋಮವಾರ (ಜ.25) ಚಾಲನೆ ಸಿಗಲಿದೆ.

ಅರಣ್ಯ ಇಲಾಖೆಯು, ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದ ಶ್ರೀಗಂಧ ಕೋಠಿಯಲ್ಲಿ ಈ ಮ್ಯೂಸಿಯಂ ಸ್ಥಾಪಿಸಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಉದ್ಘಾಟಿಸಲಿದ್ದಾರೆ ಎಂದು ಉಪ ಅರಣ್ಯ
ಸಂರಕ್ಷಣಾಧಿಕಾರಿ ಕೆ.ಸಿ.ಪ್ರಶಾಂತಕುಮಾರ್‌ ತಿಳಿಸಿದರು.

ರೈತರು ಬೆಳೆದ ಶ್ರೀಗಂಧದ ಮರವನ್ನು ಮಾರಾಟ ಮಾಡಲು ಅನುಕೂಲ ಕಲ್ಪಿಸಲು ಹಾಗೂ ಶ್ರೀಗಂಧವನ್ನು ಹೊಸದಾಗಿ ಬೆಳೆಯಲು ಉದ್ದೇಶಿಸಿರುವ ರೈತರಿಗೆ ಬೆಳೆಯ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮ್ಯೂಸಿಯಂ ಸ್ಥಾಪಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.