ADVERTISEMENT

35 ಸಾವಿರ ದೇವಾಲಯ ಮರು ನಿರ್ಮಾಣವಾಗಲಿ: ಎಸ್‌.ಎಲ್‌.ಭೈರಪ್ಪ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 20:58 IST
Last Updated 3 ಜನವರಿ 2021, 20:58 IST
ಎಸ್‌.ಎಲ್. ಭೈರಪ್ಪ
ಎಸ್‌.ಎಲ್. ಭೈರಪ್ಪ   

ಮೈಸೂರು: ‘ದೇಶದಲ್ಲಿ ಸುಮಾರು 35 ಸಾವಿರ ದೇವಾಲಯಗಳು ಒಡೆದು ಛಿದ್ರವಾಗಿವೆ. ಅವುಗಳನ್ನು ಮರುನಿರ್ಮಾಣ ಮಾಡಿ ಮೂಲ ವಾರಸು ದಾರರಿಗೆ ಒಪ್ಪಿಸುವಂತಹ ಕಾನೂನನ್ನು ಪಾರ್ಲಿಮೆಂಟ್‌ ರೂಪಿಸಲಿ’ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಆಗ್ರಹಿಸಿದರು.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹಿಂದೂ ಧರ್ಮದ ದೇವರು ಮತ್ತು ಬೇರೆ ಧರ್ಮದ ದೇವರನ್ನು ಹೋಲಿಸಿದಾಗ ಬೇರೆ ಧರ್ಮದವರ ದೇವರು ಮಹಾ ಕೋಪಿಷ್ಠ ಎಂಬುದು ತಿಳಿಯುತ್ತದೆ. ಬೇರೆ ಧರ್ಮದ ದೇವರನ್ನು ಒಂದೇ ಒಂದು ಮಾತಿನಿಂದ ಟೀಕೆ ಮಾಡಿದರೆ ನಿಮ್ಮ ಕತೆ ಮುಗಿದಂತೆ. ಆದರೆ, ನಮ್ಮ ದೇಶದಲ್ಲಿ ನಾವು ದೇವರನ್ನೂ ಟೀಕೆ ಮಾಡುತ್ತೇವೆ. ಅವನು ಮಾಡಿದ್ದು ಸರಿಯೋ, ತಪ್ಪೋ ಎಂದು ಆಲೋಚನೆ ಮಾಡುತ್ತೇವೆ’ ಎಂದು ಅವರು ಹೇಳಿದರು.

ADVERTISEMENT

ಪಂಜಾಬಿಗಳಿಂದ ಮಾತ್ರ ವಿರೋಧ: ‘ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನವದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಪಂಜಾಬಿಗಳು ಮಾತ್ರ.ಈ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಕೊಳಕು ರಾಜಕೀಯ ಮಾಡುತ್ತಿವೆ’ ಎಂದು
ಎಸ್‌.ಎಲ್‌.ಭೈರಪ್ಪ ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.