ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರಿಗೆ ಸಮಯವಿದ್ದರೆ ರಾಷ್ಟ್ರಪತಿಗೂ ರಾಜೀನಾಮೆ ಪತ್ರ ನೀಡಲಿ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಬುಧವಾರ ಕುಟುಕಿದರು.
ರಾಜ್ಯಪಾಲರಿಗೂ ಸಿಂಗ್ ರಾಜೀನಾಮೆ ಪತ್ರ ನೀಡಿರುವುದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
‘ಸಾರ್ವಜನಿಕರ ಅಭಿಪ್ರಾಯ ಪಡೆದು, ದೂರು ಆಲಿಸಿದ ನಂತರ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ರಾಜೀನಾಮೆಗೆ ಏನು ಕಾರಣ ಎಂಬುದು ಗೊತ್ತಿಲ್ಲ.ರಾಜಕೀಯ ಪಕ್ಷದಿಂದ ಆಯ್ಕೆ ಆಗಿರುವುದರಿಂದಸಕಾರಣ ನೀಡಬೇಕಾಗುತ್ತದೆ. ಎಲ್ಲ ಮಾಹಿತಿ ಪಡೆದ ನಂತರ ರಾಜೀನಾಮೆ ಒಪ್ಪಬಹುದು, ಇಲ್ಲವೆ ತಿರಸ್ಕರಿಸಬಹುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.