ADVERTISEMENT

ಚಿಕ್ಕಬಳ್ಳಾಪುರ: ಸಚಿವ ಸುಧಾಕರ್‌ ಚಿತ್ರಕ್ಕೆ ಸ್ಟಿಕ್ಕರ್!

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 19:10 IST
Last Updated 14 ಜನವರಿ 2023, 19:10 IST
ಸಚಿವ ಡಾ.ಸುಧಾಕರ್ ಭಾವಚಿತ್ರದ ಮೇಲೆ ಸ್ಟಿಕ್ಕರ್ ಅಂಟಿಸಿರುವುದು
ಸಚಿವ ಡಾ.ಸುಧಾಕರ್ ಭಾವಚಿತ್ರದ ಮೇಲೆ ಸ್ಟಿಕ್ಕರ್ ಅಂಟಿಸಿರುವುದು   

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ಉತ್ಸವ’ದ ಅಂಗವಾಗಿ ನಗರ ಹೊರವಲಯದ ಚದುಲಪುರ ಗೇಟ್ ಬಳಿ ಅಳವಡಿಸಿರುವ ಸ್ವಾಗತ ಕಮಾನಿನಲ್ಲಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ಭಾವಚಿತ್ರಕ್ಕೆ ಅಪರಿಚಿತರು ಸ್ಟಿಕ್ಕರ್ ಅಂಟಿಸಿದ್ದಾರೆ.

ಏನಿದೆ ಸ್ಟಿಕ್ಕರ್‌ನಲ್ಲಿ?: ಸಚಿವ ಸುಧಾಕರ್‌ ಭಾವಚಿತ್ರದ ಮುಖದ ಮೇಲೆ ಶುಕ್ರವಾರ ರಾತ್ರಿ ಈ ಪೋಸ್ಟರ್‌ ಅಂಟಿಸಲಾಗಿದೆ. ‌‘ಚಾಮರಾಜನಗರ ಆಕ್ಸಿಜನ್ ದುರಂತ 24 ಜನ ಸಾವು. ಮಹಾಜನಗಳೇ ನಮ್ಮನ್ನು ನಂಬಿದರೆ ಕಳೆದ ಬಾರಿಯ ಹಾಗೆಯೇ
ನಿಮಗೆ ಬೆಡ್ ಆಗಲಿ, ಆಕ್ಸಿಜನ್ ಆಗಲಿ ಸಿಗುವುದಿಲ್ಲ. ಪ್ರಾಣ ಉಳಿಸಿಕೊಳ್ಳುವ ಆಸೆ ಇದ್ದರೆ ಮಾಸ್ಕ್ ಧರಿಸಿ’ ಎಂಬ ಬರಹವಿದೆ. ಸ್ಟಿಕ್ಕರ್ ಅಂಟಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT