ಭದ್ರಾವತಿ: ‘ಡ್ರಗ್ಸ್ ಮಾಫಿಯಾ ವಿರುದ್ಧದ ತನಿಖೆ ಸರಿಯಾದ ಹಾದಿಯಲ್ಲಿ ಸಾಗಿದೆ. ಇದರಲ್ಲಿ ಇನ್ನೂ ಕೆಲವರ ಹೆಸರು ಕೇಳಿಬರುತ್ತಿದ್ದು ಕೂಡಲೇ ತನಿಖೆಗೆ ಒಳಪಡಿಸಿ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದಿಂದ ಎದುರಾದ ಪ್ರಶ್ನೆಗೆ ಉತ್ತರಿಸಿದ ಅವರು ‘ನಮ್ಮ ಹಿಂದಿನ ಮಿತ್ರರೊಬ್ಬರು ಡ್ರಗ್ಸ್ ವಿಚಾರಕ್ಕೆ ಹೊರತಾಗಿ ಹಲವು ಸಂಗತಿಗಳನ್ನು ಎಳೆಯುವ ಪ್ರಯತ್ನ ನಡೆಸಿದ್ದಾರೆ,ಈ ರೀತಿ ವಿಷಯಾಂತರ ಮೂಲಕ ತನಿಖೆ ಹಾದಿ ತಪ್ಪುವುದು ಸರಿಯಲ್ಲ ತನಿಖೆ ಈಗ ಸಾಗಿರುವ ಹಾದಿಯಲ್ಲೇ ಮುಂದುವರೆಯಲಿ ಎಂಬುದು ನಮ್ಮ ಒತ್ತಾಯ’ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.