ಬೆಂಗಳೂರು: ಉರೀಗೌಡ, ನಂಜೇಗೌಡ ಚಿತ್ರ ಸ್ಥಗಿತದ ಬಗ್ಗೆ ‘ಗುರುಗಳು ಹೇಳಿದಂತೆ ಕೇಳಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುನಿರತ್ನ ಅವರು ಇತಿಹಾಸವನ್ನು ತೆಗೆದುಕೊಂಡು ಚಿತ್ರ ತಯಾರಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲ. ಅವರಲ್ಲಿ ಯಾವ ರೀತಿ ಸಾಹಿತ್ಯ, ಮಾಹಿತಿ ಇದೆ ಎಂಬ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುತ್ತೇನೆ’ ಎಂದು ಹೇಳಿದರು.
ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರು ಚಿತ್ರ ನಿರ್ಮಿಸದಂತೆ ಸೂಚಿಸಿದ್ದಾರೆ ಎಂಬ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ, ‘ಗುರುಗಳು ಹೇಳಿದಂತೆ ಕೇಳಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.