ADVERTISEMENT

ಇದೇ 18ರಿಂದ ರಾಷ್ಟ್ರ ಮಟ್ಟದ ಚರ್ಚಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 19:16 IST
Last Updated 3 ಜನವರಿ 2019, 19:16 IST

ಬೆಂಗಳೂರು: ನಗರದ ವರ್ಬಾಟಲ್‌ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳಿಗಾಗಿ ರಾಷ್ಟ್ರ ಮಟ್ಟದ ಚರ್ಚಾ ಸ್ಪರ್ಧೆಯನ್ನು ಇದೇ 18ರಿಂದ 25ರವರೆಗೆ ಹಮ್ಮಿಕೊಂಡಿದೆ.

ಇಲ್ಲಿನ ಕುಮಾರಸ್ವಾಮಿ ಲೇಔಟ್‌ನ ದಯಾನಂದ ಸಾಗರ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಈ ಸ್ಪರ್ಧೆ ನಡೆಯಲಿದೆ. 7ರಿಂದ 10ನೇ ತರಗತಿಯ 12ರಿಂದ 16 ವರ್ಷದ ಒಳಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ವಿಜೇತ ತಂಡಕ್ಕೆ ₹ 2 ಲಕ್ಷ ನಗದು ಬಹುಮಾನ ಇರಲಿದೆ. ಅಂತಿಮ ಸುತ್ತಿನವರೆಗೆ ಬಂದ ಎರಡು ತಂಡಗಳಿಗೆ ತಲಾ ₹ 50 ಸಾವಿರ ಬಹುಮಾನ ಇರಲಿದೆ. ಉತ್ತಮ ವಾಕ್ಪಟುವಿಗೆ ₹ 20 ಸಾವಿರ, ವಿಜೇತ ತಂಡದ ಮಾರ್ಗದರ್ಶಕರಿಗೆ ₹ 20 ಸಾವಿರ ನಗದು ಬಹುಮಾನ ಇರಲಿದೆ.

ADVERTISEMENT

ಪ್ರವೇಶ ಶುಲ್ಕ ₹ 3,200 (ಊಟ, ವಸತಿ ಸೇರಿ). ಬೆಂಗಳೂರಿನ ವಿದ್ಯಾರ್ಥಿಗಳಿಗೆ ₹ 1,200 (ವಸತಿ ಇರುವುದಿಲ್ಲ). ಹೆಚ್ಚಿನ ಮಾಹಿತಿಗೆ www.verbattle.com ನೋಡಬಹುದು ಅಥವಾ ಮೊಬೈಲ್‌ 91-9900119911 ಸಂಪರ್ಕಿಸಬಹುದು ಎಂದುಸಂಸ್ಥೆಯ ಸಂಸ್ಥಾಪಕ ದೀಪಕ್‌ ತಿಮ್ಮಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.