ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ದೋಟಿಕೊಳ ಗ್ರಾಮದ ಹೊರವಲಯದ ಹೊಲಕ್ಕೆ ಸೋಮವಾರ ತೆರಳಿದ್ದ ಅತ್ತೆ, ಸೊಸೆಯ ಮೇಲೆ ಕಾಡು ಹಂದಿ ದಾಳಿ ನಡೆಸಿ ಗಾಯಗೊಳಿಸಿದೆ.
ಮಹಾದೇವಿ ನೀಲಪ್ಪ (57), ಮೀನಾಕ್ಷಿ ಮಹೇಶ್ (21) ಗಾಯಗೊಂಡವರು. ಇವರನ್ನು ಚಿಂಚೋಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೋಟಿಕೋಳ ಗ್ರಾಮದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡು ಹಂದಿ ತಿವಿದಿದೆ. ಮೀನಾಕ್ಷಿ ಅವರಿಗೆ ತೋಡೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮಹಾದೇವಿಯವರಿಗೆ ಮೊಣಕಾಲಿನ ಕೆಳ ಭಾಗಕ್ಕೆ ಗಾಯಗಳಾಗಿವೆ. ತಾಯಿ ಹಾಗೂ ಪತ್ನಿಯ ಚೀರಾಟ ಕೇಳಿ ಪಕ್ಕದ ಹೋಲದಲ್ಲಿದ್ದ ಹಿರಿಯ ಮಗ ಬಂದು ಕಾಪಾಡಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.