ADVERTISEMENT

ಸಿಎಂ ಬೊಮ್ಮಾಯಿ ಪುತ್ರ ಭರತ್‌ಗೆ ಅಂತರರಾಷ್ಟ್ರೀಯ ಟೈಟಾನ್‌ ಬಿಸಿನೆಸ್ ಅವಾರ್ಡ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 2:56 IST
Last Updated 8 ಅಕ್ಟೋಬರ್ 2022, 2:56 IST
ಭರತ್‌ ಬೊಮ್ಮಾಯಿ
ಭರತ್‌ ಬೊಮ್ಮಾಯಿ   

ಬೆಂಗಳೂರು: ಯುವ ಉದ್ಯಮಿ ಭರತ್ ಬಿ.ಬೊಮ್ಮಾಯಿ ಅವರಿಗೆ 2022ನೇ ಸಾಲಿನ ಅಂತರರಾಷ್ಟ್ರೀಯ ‘ಟೈಟಾನ್ ಬಿಸಿನೆಸ್ ಅವಾರ್ಡ್’ ಲಭಿಸಿದೆ.

ಭರತ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ.ಅಶ್ವ ಎನರ್ಜಿ ಮತ್ತು ವಾಲ್ಟೆಕ್‌ ಸಂಸ್ಥೆಗಳನ್ನು ನಡೆಸುತ್ತಿರುವ ಅವರು, ಉತ್ಪಾದನೆ ವಿಭಾಗದಲ್ಲಿ ವರ್ಷದ ಜಾಗತಿಕ ವಾಣಿಜ್ಯೋದ್ಯಮಿಯಾಗಿ ಗುರುತಿಸಿಕೊಂಡಿದ್ದು, ಟೈಟಾನ್ ಬಿಸಿನೆಸ್ ಅವಾರ್ಡ್‌ ಸೀಸನ್–2ರಲ್ಲಿ ವಿಜಯ ಸಾಧಿಸಿದ್ದಾರೆ.

ಸ್ಪರ್ಧೆಗೆ 55 ದೇಶಗಳಿಂದ ಒಂದು ಸಾವಿರಕ್ಕೂ ಹೆಚ್ಚು ಉದ್ಯಮ ಸಂಸ್ಥೆಗಳು ಸ್ಪರ್ಧಿಸಿದ್ದವು.15 ದೇಶಗಳಿಂದ ಸುಮಾರು 27 ತೀರ್ಪುಗಾರರನ್ನು ನೇಮಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.