ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಸೋಮವಾರ 14-9-1970

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 19:31 IST
Last Updated 13 ಸೆಪ್ಟೆಂಬರ್ 2020, 19:31 IST
   

ದಸರೆಯಲ್ಲಿ ಸರ್ಕಾರ ಭಾಗವಹಿಸದು: ಜಂಬೂಸವಾರಿ ಇಲ್ಲ

ಬೆಂಗಳೂರು, ಸೆ. 13– ರಾಜ್ಯ ಸರ್ಕಾರ ಭಾಗವಹಿಸದ ಕಾರಣ ದಸರಾದ ಪ್ರಮುಖ ಆಕರ್ಷಣೆಗಳಾದ ದರ್ಬಾರ್‌ ಜಂಬೂಸವಾರಿ ಹಾಗೂ ಟಾರ್ಚ್‌ಲೈಟ್‌ ಪರೇಡ್‌ ಉತ್ಸವಗಳು ನಡೆಯದಿರುವುದು ಖಚಿತವಾದಂತಾಗಿದೆ.

ಈ ಉತ್ಸವಗಳನ್ನು ಮಾಜಿ ಮಹಾರಾಜರು ಸರ್ಕಾರದ ಯಾವ ಪಾತ್ರವೂ ಇಲ್ಲದೆ ಖಾಸಗಿಯಾಗಿ ಆಚರಿಸಿಕೊಳ್ಳಲು ಅವಕಾಶವಿದೆ.

ADVERTISEMENT

ಆದರೆ, ಖಾಸಗಿಯಾಗಿ ಈ ಉತ್ಸವಗಳನ್ನು ಜರುಗಿಸಲು ಶ್ರೀ ಜಯಚಾಮರಾಜ ಒಡೆಯರ್‌ ಅವರಿಗೆ ಇಷ್ಟವಿಲ್ಲ ಎಂಬ ಭಾವನೆ ತಮಗೆ ಮೂಡೆತೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಮಾಜಿ ಮಹಾರಾಜರನ್ನು ಭೇಟಿ ಮಾಡಿದ ನಂತರ ವರದಿಗಾರರಿಗೆ ತಿಳಿಸಿದರು.

ವಿದ್ಯುತ್‌ ಯೋಜನೆಗಳ ರಾಷ್ಟ್ರೀಯ ಜಾಲ ರಚನೆಗೆ ಗಿರಿ ಸಲಹೆ

ಬೆಂಗಳೂರು, ಸೆ. 12– ನಾನಾ ರಾಜ್ಯಗಳ ವಿದ್ಯುಚ್ಛಕ್ತಿ ಅಭಿವೃದ್ಧಿ ಯೋಜನೆಗಳನ್ನು ಸಂಯೋಜಿಸಿ ಈ ಯೋಜನೆಗಳ ರಾಷ್ಟ್ರೀಯ ಜಾಲವನ್ನು ರೂಪಿಸಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ ಗಿರಿಯವರು ಇಂದು ಇಲ್ಲಿ ಸಲಹೆ ಮಾಡಿದರು.

‘ಈ ರೀತಿ ವ್ಯವಸ್ಥೆಯಿಂದ ದೇಶದ ಎಲ್ಲ ಭಾಗಗಳಿಗೂ ಸಾಕಷ್ಟು ವಿದ್ಯುಚ್ಛಕ್ತಿ ದೊರಕಿ ಕೆಲವೆಡೆ ವಿದ್ಯುಚ್ಛಕ್ತಿಯ ಅಭಾವ ಮತ್ತೆ ಕೆಲವೆಡೆ ಬೇಡಿಕೆಗಿಂತ ಅಧಿಕ ವಿದ್ಯುಚ್ಛಕ್ತಿ ಇರುವ ಸ್ಥಿತಿ ತಪ್ಪುತ್ತೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.