ADVERTISEMENT

ಸವಿತಾ ಸಾವು: ಸಾಕ್ಷಿ ನುಡಿದ ಗೆಳತಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಲಂಡನ್ (ಪಿಟಿಐ): ಗರ್ಭಪಾತ ಮಾಡಲು ನಿರಾಕರಿಸ್ದ್ದಿದೇ ಭಾರತ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ ಸಾವಿಗೆ ಕಾರಣ ಎಂದು ಅವರ ಗೆಳತಿಯೊಬ್ಬರು ಐರ್ಲೆಂಡ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಐರ್ಲೆಂಡ್‌ನ ಗಾಲ್‌ವೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಎರಡನೇ ದಿನ ಸಾಕ್ಷಿ ನುಡಿದ ಸವಿತಾ ಸ್ನೇಹಿತೆ ಮೃದುಲಾ ವಾಸ್‌ಪಲ್ಲಿ, ಗರ್ಭಪಾತ ಮಾಡುವಂತೆ ಮನವಿ ಮಾಡಿದ ಸಂದರ್ಭದಲ್ಲಿ ನರ್ಸ್ ಒಬ್ಬರು; `ಇಲ್ಲಿ ನಾವು ಅದನ್ನು ಮಾಡುವುದಿಲ್ಲ. ಇದು ಕ್ಯಾಥೋಲಿಕ್ ಧರ್ಮಕ್ಕೆ ವಿರುದ್ಧ'  ಎಂದು ಹೇಳಿದ್ದರು ಎಂಬುದಾಗಿ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.