ಲಾಹೋರ್: ಮುಂಬೈ ದಾಳಿಯ ಪ್ರಮುಖ ಸಂಚುಕೋರ, ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಜಿಹಾದ್ ಹೆಸರಿನಲ್ಲಿ ಭಯೋತ್ದಾನೆ ಹರುಡುತ್ತಿದ್ದಾನೆ’ ಎಂದು ಪಾಕಿಸ್ತಾನ ತಿಳಿಸಿದೆ.
ಹಫೀಜ್ ಸಯೀದ್ ಸೇರಿದಂತೆ ಆತನ ನಾಲ್ವರು ಸಹಚರರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದು, ಸಯೀದ್ ಜಿಹಾದ್ ಹೆಸರಿನಲ್ಲಿ ಭಯೋತ್ಪಾದನೆ ಹರಡುತ್ತಿದ್ದಾನೆ ಎಂಬುದನ್ನು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ.
ಭಯೋತ್ಪಾದನೆ ಹರಡುವ ಆರೋಪದಡಿಯಲ್ಲಿ ಸಯೀದ್ನನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಗೃಹ ಸಚಿವಾಲಯ ತಿಳಿಸಿದೆ.
ಶನಿವಾರ ಪಾಕ್ ನ್ಯಾಯಾಂಗ ಮಂಡಳಿಗೆ ಹಾಜರಾದ ಸಯೀದ್ , ಕಾಶ್ಮೀರಿಗಳ ಪರ ದನಿ ಎತ್ತಿದ ಕಾರಣ ಬಂಧಿಸಲಾಗಿದೆ ಎಂದು ಹೇಳಿದ್ದರು. ಆದರೆ ಗೃಹ ಸಚಿವಾಲಯ ಸಯೀದ್ ವಾದವನ್ನು ತಳ್ಳಿಹಾಕಿದ್ದು, ಜಿಹಾದೀ ಹೆಸರಿನಲ್ಲಿ ಭಯೋತ್ಪಾದನೆ ಹರಡುತ್ತಿದ್ದಾನೆ ಎಂದು ಹೇಳಿತ್ತು.
ಇವರ ವಾದವನ್ನು ಆಲಿಸಿದ ಮೂವರು ನ್ಯಾಯಾಧೀಶರು ಈ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.