ಇಸ್ಲಾಮಾಬಾದ್: ನವದೆಹಲಿಯಲ್ಲಿ ಜ. 1ರಿಂದ 8ರವರೆಗೆ ನಡೆಯಲಿರುವ ನಿಜಾಮುದ್ದೀನ್ ಉರುಸ್ನಲ್ಲಿ ಪಾಲ್ಗೊಳ್ಳಲು ಬಯಸಿದ್ದ 192 ಯಾತ್ರಾರ್ಥಿಗಳಿಗೆ ವೀಸಾ ನೀಡಲು ಭಾರತ ನಿರಾಕರಿಸಿದೆ ಎಂದು ಪಾಕಿಸ್ತಾನ ದೂರಿದೆ.
ಹಜರತ್ ಖವಾಜ ನಿಜಾಮುದಿನ್ ಔಲಿಯಾ ಅವರ ಪುಣ್ಯ ತಿಥಿ ಅಂಗವಾಗಿ ಈ ಉರುಸ್ ನಡೆಯಲಿದೆ.’ಕೊನೆ ಕ್ಷಣದಲ್ಲಿ ವೀಸಾ ನೀಡಲು ನಿರಾಕರಿಸಿರುವುದು ಬೇಸರ ಮೂಡಿಸಿದೆ. ಭಾರತದ ನಿರ್ಧಾರದಿಂದ ಮಹತ್ವದ ಉರುಸ್ನಲ್ಲಿ ಪಾಲ್ಗೊಳ್ಳಲು ಯಾತ್ರಾರ್ಥಿಗಳಿಗೆ ಅವಕಾಶ ದೊರೆಯದಂತಾಗಿದೆ’ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತಿಳಿಸಿದೆ.
‘ಧಾರ್ಮಿಕ ಸ್ಥಳಗಳಿಗೆ ಮತ್ತು ವಾರ್ಷಿಕವಾಗಿ ನಡೆಯುವ ಉತ್ಸವಗಳಲ್ಲಿಪಾಲ್ಗೊಳ್ಳಲು ಅವಕಾಶಕಲ್ಪಿಸುವ ಉದ್ದೇಶದಿಂದ 1974ರಲ್ಲಿ ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದದ ಅನ್ವಯವೇ ಯಾತ್ರಾರ್ಥಿಗಳು ನವದೆಹಲಿಗೆ ಭೇಟಿ ನೀಡುವ ಉದ್ದೇಶ ಹೊಂದಿದ್ದರು. ಆದರೆ, ಈಗ ಭಾರತ ಕೈಗೊಂಡಿರುವ ಕ್ರಮ 1974ರ ಒಪ್ಪಂದವನ್ನು ಉಲ್ಲಂಘಿಸುತ್ತದೆ’ ಎಂದು ಅದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.