ADVERTISEMENT

ಹಡಗು ದುರಂತ 31 ಮಂದಿ ಸಾವು

ರಾಯಿಟರ್ಸ್
Published 4 ಜುಲೈ 2018, 19:31 IST
Last Updated 4 ಜುಲೈ 2018, 19:31 IST

ಜಕಾರ್ತ: ಚಂಡಮಾರುತದ ಪರಿಣಾಮ ಇಂಡೊನೇಷ್ಯಾದ ಪ್ರಯಾಣಿಕ ಹಡಗೊಂದು ಸುಲಾವೆಸಿ ದ್ವೀಪ ಪ್ರದೇಶದಲ್ಲಿ ಮುಳುಗಿ 31 ಜನ ಮೃತಪಟ್ಟಿದ್ದಾರೆ.

ಸಮಯಪ್ರಜ್ಞೆ ಮೆರೆದ ನಾವಿಕ ಮುಳುಗುತ್ತಿರುವ ಹಡಗನ್ನು ದಿಬ್ಬವೊಂದರತ್ತ ಮುನ್ನಡೆಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಹಡಗಿನಲ್ಲಿದ್ದ 130 ಮಂದಿಯನ್ನು ರಕ್ಷಿಸಲಾಗಿದೆ. ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.