ಲಾಹೋರ್ :20 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸೇನೆ ಸೋಮವಾರ ವಾಘಾ ಗಡಿಯಲ್ಲಿ ಬಿಎಸ್ಎಫ್ಗೆ ಹಸ್ತಾಂತರಿಸಿದೆ.
ಎರಡೂ ರಾಷ್ಟ್ರಗಳ ಸಂಬಂಧಗಳು ನನೆಗುದಿಗೆ ಬಿದ್ದಿದ್ದ ವೇಳೆ ಮೀನುಗಾರರ ಬಿಡುಗಡೆ ಉತ್ತಮ ಬೆಳವಣಿಗೆ ಎಂದು ಮಾಧ್ಯಮಗಳು ಬಣ್ಣಿಸಿವೆ. ಮೀನುಗಾರರು ಸಿಂಧ್ ಪ್ರಾಂತ್ಯದ ಮಲೀರ್ ಜಿಲ್ಲಾ ಜೈಲಿನಲ್ಲಿ ಬಂಧಿಯಾಗಿದ್ದರು. ಅವರನ್ನು ಭಾನುವಾರ ಬಿಡುಗಡೆಗೊಳಿಸಿ ಲಾಹೋರ್ಗೆರೈಲಿನಲ್ಲಿ ಕರೆತರಲಾಗಿತ್ತು.
ಸ್ವಯಂಸೇವಾ ಸಂಸ್ಥೆ ‘ಈಧೀ ಫೌಂಡೇಶನ್’ ಲಾಹೋರ್ ರೈಲು ನಿಲ್ದಾಣದಲ್ಲಿ ಬಿಡುಗಡೆಗೊಂಡವರನ್ನು ಬರಮಾಡಿಕೊಂಡಿತು. ಅಲ್ಲದೆ, ಅವರಿಗೆ ಹೊಸ ಉಡುಗೆಗಳನ್ನು ನೀಡಿ ಸತ್ಕರಿಸಿತು.
‘ಬಿಡುಗಡೆಗೊಂಡವರಲ್ಲಿ ಬಹುತೇಕರು ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ.‘ಜಲಗಡಿಯನ್ನು ದಾಟಿದ್ದರಿಂದಾಗಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆ 2018ರಲ್ಲಿ ನಮ್ಮನ್ನು ಬಂಧಿಸಿತ್ತು’ ಎಂದುಮೀನುಗಾರ ಗಿರ್ ಸೋಮನಾಥ್ ಹೇಳಿದ್ದಾರೆ.
‘ಗಡಿಯನ್ನು ಪ್ರವೇಶಿಸಿದ್ದರಿಂದ 6 ತಿಂಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಬಂಧಿತರ ದಾಖಲೆ ಪತ್ರಗಳ ಸಾಬೀತಿಗೆ ಆದ ವಿಳಂಬ ಮತ್ತು ಇತರ ಕಾರಣಗಳಿಗಾಗಿ ಬಿಡುಗಡೆ ತಡವಾಗಿದೆ’ ಎಂದು ಜೈಲು ಅಧೀಕ್ಷಕ ಔರಂಗ್ಜೇಬ್ ಕಂಗೋ ತಿಳಿಸಿದ್ದಾರೆ.ಜೈಲಿನಲ್ಲಿ ಇನ್ನೂ 200 ಮಂದಿ ಭಾರತೀಯ ಮೀನುಗಾರರು ಇದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.